ವಿಟ್ಲ ತಾಲೂಕು ಶೌರ್ಯ ವೀಪತ್ತು ನಿರ್ವಾಹಣ ಘಟಕ ಪ್ರತಿನಿಧಿಗಳ ಸಭೆ

Share with

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ವಿಟ್ಲ, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಇದರ  ವಿಟ್ಲ ತಾಲೂಕು ಶೌರ್ಯ ವೀಪತ್ತು ನಿರ್ವಾಹಣ ಘಟಕ ಪ್ರತಿನಿಧಿಗಳ ಸಭೆ ವಿಟ್ಲ ಯೋಜನಾ ಕಚೇರಿಯ ಸಭಾಭವನದಲ್ಲಿ ಶುಕ್ರವಾರ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷರಾದ  ನವೀನ್ ಚಂದ್ರ ವಹಿಸಿದರು.

ಜನ ಜಾಗ್ರತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ  ವಿವೇಕ್ ವಿನ್ಸೆಂಟ್ ಪಾಯಸ್  ಕಾರ್ಯಕ್ರಮ ಉದ್ಘಾಟಿಸಿ
ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿ ವಿಟ್ಲ ಇದರ ಪ್ರತಿಷ್ಟಾನ  ಮಹೋತ್ಸವ ಕಾರ್ಯಕ್ರಮದ ಯಶಸ್ವೀಯಲ್ಲಿ ಶೌರ್ಯ ವೀಪತ್ತು ನಿರ್ವಾಹಣ ಘಟಕಕ್ಕೆ ನೀಡಿದ ಜವಾಬ್ದಾರಿಯ ಯಶಸ್ವೀ ನಿರ್ವಹಣೆ ಬಗ್ಗೆ   ಮಾರ್ಗದರ್ಶನ ನೀಡಿದರು.

ಜಿಲ್ಲಾ ನಿರ್ದೇಶಕರಾದ  ಪ್ರವೀಣ್  ಹಾಗೂ  ಪಶು ವೈದ್ಯಧಿಕಾರಿ ಮಂದಾರ ಜೈನ್ ಕಾರ್ಯಕ್ರಮದ ಮಾಹಿತಿ ನೀಡಿದರು.  

ವೇದಿಕೆಯಲ್ಲಿ ವಿಪತ್ತು ಘಟಕದ ಯೋಜನಾಧಿಕಾರಿ ಜೈವಂತ್ ಪಟೇಗಾರ್, ವಿಟ್ಲ ಯೋಜನಾಧಿಕಾರಿ  ರಮೇಶ್, ವಿಪತ್ತು ಘಟಕದ ತಾಲ್ಲೂಕು ಕ್ಯಾಪ್ಟನ್ ದೀಪಕ್ ಉಪಸ್ಥಿತರಿದ್ದರು


ಸಭೆಯಲ್ಲಿ , ಗ್ರಾಮಾಭಿವೃದ್ಧಿ ಯೋಜನೆಯ  ತಾಲೂಕಿನ ಎಲ್ಲಾ ವಲಯದ ವಲಯಾಧ್ಯಕ್ಷರು, ವಿಪತ್ತು ಘಟಕ ಪ್ರತಿನಿಧಿಗಳು,ಸಂಯೋಜಕರು,ಕಛೇರಿ ಸಹಾಯಕ  ಪ್ರಬಂಧಕಕಿ ವಾಣಿ,,ಸೇವಾಪ್ರತಿನಿಧಿಗಳು, ಉಪಸ್ಥಿತರಿದ್ದರು.

ವಿಟ್ಲ ವಲಯ ಮೇಲ್ವಿಚಾರಕಿ  ಸರಿತಾ ಸ್ವಾಗತಿಸಿ,  ಜ್ಞಾನ ವಿಕಾಸ ಸಮನ್ವಯಧಿಕಾರಿ ದೀಪಾ ವಂದಿಸಿದರು. ಯೋಜನೆಯ ಕೃಷಿಧಿಕಾರಿ ಚಿದಾನಂದ್ ಕಾರ್ಯಕ್ರಮ ನೀರೂಪಿಸಿದರು ,


Share with

Leave a Reply

Your email address will not be published. Required fields are marked *