ಮೀಯಪದವು: ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷಧ 139ನೇ ಸ್ಥಾಪನಾ ದಿನವನ್ನು ಆಚರಿಸಲಾಯಿತು.


ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜಿ.ರಾಮ್ ಭಟ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಕಬೈಲ್ ಸತೀಶ್ ಅಡಪ್ಪ ಮುಖ್ಯ ಪ್ರಭಾಷಣೆಗೈದರು. ನೇತಾರರಾದ ಅಬ್ದುಲ್ ಖಾದರ್ ಹಾಜೀ ತಲೇಕಳ, ಮೊಹಮ್ಮದ್ ಶಾಫೀ, ಹಮೀದ್ ಕಣಿಯೂರ್, ಪಳ್ಳಿಕುಂಞ ತಲೇಕಳ, ಜೋಕಿಂ ಮೊಂತೇರೋ, ಅಹ್ಮದ್ ಡಿ.ಎಸ್ ಮದಂಗಲ್ಲು, ಮೊಹಮ್ಮದ್ ಮೀಯಪದವು, ಹಮೀದ್ ಅಡ್ಕ ಉಪಸ್ಥಿತರಿದ್ದರು.




