
ಮoಜೇಶ್ವರ: ನ್ಯಾಷನಲ್ ವಿಶ್ವಕರ್ಮ ಫೆಡರೇಶನ್ [ಎನ್.ವಿ.ಎಫ್] ಇದರ ಮಂಜೇಶ್ವರ ಪಂಚಾಯತ್ ಸಮ್ಮೇಳನ ಫೆ.23ರಂದು ಬೆಳಿಗ್ಗೆ 10ಗಂಟೆಗೆ ಹೊಸಂಗಡಿ ಬಂಗ್ರಮoಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯ ಹಾಗೂ ಜಿಲ್ಲಾ ನೇತಾರರು ಸಮೇಳನದಲ್ಲಿ ಭಾಗವಹಿಸಿ ಮಾಹಿತಿ ನೀಡುವರು. ಪಂಚಾಯತ್ ವ್ಯಾಪ್ತಿಯ ಎಲ್ಲಾ ವಿಶ್ವಕರ್ಮ ಬಾಂಧವರು ಹಾಗೂ ಕಾಸರಗೋಡು ಆರ್ಟಿಸನ್ಸ್ ಕ್ಷೇಮಾಭಿವೃದ್ದಿ ಸಹಕಾರಿ ಸಂಸ್ಥೆಯ ಎಲ್ಲಾ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪದಾಧಿಕಾರಿಗಳು ವಿನಂತಿಸಿದ್ದಾರೆ.





