ಮಂಜೇಶ್ವರ: ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ, ಎನ್.ಡಿ.ಎ ಕಾಸರಗೋಡು ಲೋಕಸಭಾ ಅಭ್ಯರ್ಥಿಯಾಗಿರುವ ಅಶ್ವಿನಿ. ಎಂ.ಎಲ್ ರವರ ತಂದೆ ಬೆಂಗಳೂರು ಮಾದನಾಯಕನ ಹಳ್ಳಿ ನಿವಾಸಿ ಲಕ್ಷ್ಮಣ್ ಎ.ಕುಂದರ್ [೭೩] ಅನಾರೋಗ್ಯದಿಂದ ಭಾನುವಾರ ಅಪರಾಹ್ನ ಬೆಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಮೂಲತ ಮಂಗಳೂರಿನ ಕದ್ರಿ ನಿವಾಸಿಯಾಗಿದ್ದು, ಕಳೆದ ೩೯ ವರ್ಷಗಳಿಂದ ಬೆಂಗಳೂರಿನ ಮಾದನಾಯಕನ ಹಳ್ಳಿಯಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ಅಲ್ಲಿ ಹಿರಿಯ ಲಾರಿ ಮೆಕಾನಿಕ್ ಆಗಿದ್ದಾರೆ. ಮೃತರು ಪತ್ನಿ ರೇವತಿ, ಮಕ್ಕಳಾದ ಅಶ್ವಿನಿ.ಎಂ.ಎಲ್ [ಬಿಜೆಪಿ ನೇತಾರೆ], ಅರ್ಚನ, ಅನನ್ಯ, ಅಳಿಯಂದಿರಾದ ಶಶಿಧರ ಪಜ್ವ ಕೊಡ್ಲಮೊಗರು, ಪವನ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಬಿಜೆಪಿ ಕುಂಬಳೆ, ಮಂಜೇಶ್ವರ ಮಂಡಲ ಸಮಿತಿ, ಬಿಜೆಪಿ ಮಂಜೇಶ್ವರ, ಮಂಗಲ್ಪಾಡಿ ಪಂಚಾಯತ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.