ಅಂಗನವಾಡಿ, ಮದ್ರಾಸ ಬಳಿಯಲ್ಲಿ ಬೃಹತ್ ಮರ ಆತಂಕ ಸೃಷ್ಟಿ: ತೆರವುಗೊಳಿಸಲು ಗಡು ನೀಡುತ್ತಿರುವ ಅಧಿಕಾರಿಗಳು

Share with


ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿರಿಯ ಬೀಚ್ ರಸ್ತೆ ಬದಿಯ ಬೃಹತ್ ಮರವೊಂದು ಇಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿ ಹಾಗೂ ಮದ್ರಾಸಕ್ಕೆ ಅಪಾಯಕಾರಿಯಾಗಿ ಮಾರ್ಪಾಡುಗೊಂಡಿದೆ.  ಹಲವು ಭಾರಿ ಅಧಿಕಾರಿಗಳಿಗೆ ದೂರು ನೀಡಿದರೂ ತೆರವುಗೊಳಿಸುವ ಗಡು ಮಾತ್ರವೇ ನೀಡುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಈ ಬೃಹತ್ ಮರದ ರೆಂಬೆಗಳು ಅಡ್ಡಾದಿಡ್ಡಿಯಾಗಿ ಬೆಳೆದು ಅಪಾಯದಂಚಿನಲ್ಲಿದೆ. ಗಾಳಿ, ಮಳೆಗೆ ಯಾವುದೇ ಕ್ಷಣದಲ್ಲಿ  ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ  ಇಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿ ಹಾಗೂ ಮದ್ರಾಸಕ್ಕೆ ತಲುಪುವ ಮಕ್ಕಳಲ್ಲಿ ಭಯದ ವಾತಾವರಣ ಉಂಟಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ. ಅಂಗನವಾಡಿ ಕಾಂಕ್ರೀಟ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಎದುರು ಭಾಗಕ್ಕೆ ತಗಡ್ ಶೀಟನ್ನು ಹೊದಿಸಲಾಗಿದೆ. ಇದೆ ಪರಿಸರದಲ್ಲಿ ಹೆಂಚು ಹಾಸಿದ ಕಟ್ಟಡದಲ್ಲಿ ಮದ್ರಾಸ ಕಾರ್ಯಾಚರಿಸುತ್ತಿದ್ದು  ಈ ಮರದಿಂದ ಅಪಾಯಕ್ಕೆ ಕಾರಣವಾಗಿದೆ. ಮರದ ಒಣಗಿದ  ತುಂಡುಗಳು ಪದೇ ಪದೇ ಕಟ್ಟಡದ ಮೇಲೆ ಬೀಳುತ್ತಿರುವುದು ಆತಂಕ ಉಂಟುಮಾಡಿದೆ.  ಮಳೆಗೆ ಯಾವುದೆ ಕ್ಷಣದಲ್ಲಿ ರೆಂಬೆಗಳು ಮುರಿದು  ಬೀಳುವ ಆತಂಕ ಸ್ಥಳೀಯರನ್ನು ಕಾಡಿದೆ. ಅಲ್ಲದೆ ಇದೇ ಪರಿಸರದಲ್ಲಿ ಟ್ರಾನ್ಸ್ ಫಾರ್ಮರ್ ಕೂಡಾ ಇರುವುದು ಅಪಾಯ ಕೈಬೀಸಿ ಕರೆಯುತಿದೆ.  ಅಪಾಯಕ್ಕೆ ಕಾರಣವಾದ ಮರದ ರೆಂಬೆಗಳನ್ನು ತೆರವುಗೊಳಿಸಬೇಕೆಂದು  ವರ್ಷಗಳ ಹಿಂದೆ  ಊರವರು ಜಿಲ್ಲಾಧಿಕಾರಿ, ಮಂಗಲ್ಪಾಡಿ ಪಂಚಾಯತ್ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದು, ಇದುವರೆಗೂ ಯಾವುದೆ ಕ್ರಮಕ್ಕೆ ಮುಂದಾಗಲಿಲ್ಲವೆoದು ಊರವರು ತಿಳಿಸಿದ್ದಾರೆ.  ಮೇ ತಿಂಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಲುಪಿ ಮರವನ್ನು ತಪಾಸಣೆ ಹಾಗೂ ಅಳತೆ   ಮಾಡಿ ಶೀಘ್ರ ತೆರವುಗೊಳಿಸುವುದಾಗಿ ತಿಳಿಸಿ ಹೋದವರು  ಮರಳಿ ಬರಲಿಲ್ಲವೆಂದು ಸ್ಥಳೀಯರು ತಿಳೀಸಿದ್ದಾರೆ. ಸಂಬoಧಪಟ್ಟ ಅಧಿಕಾರಿಗಳ ವರ್ಗ ಇನ್ನಾದರೂ  ಈ ಬಗ್ಗೆ ಕ್ರಮ ಕೈಗೊಳಬೇಕಾಗಿದೆ.


Share with

Leave a Reply

Your email address will not be published. Required fields are marked *