ಪ್ರತಾಪನಗರ ರಸ್ತೆಯಲ್ಲಿ ತುಂಬಿಕೊoಡ ಮಳೆ ನೀರು: ವಾಹನ ಸಹಿತ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ

Share with


ಉಪ್ಪಳ: ರಸ್ತೆಯಲ್ಲಿ ಚರಂಡಿಯ ಅವ್ಯವಸ್ಥೆಯಿಂದಾಗಿ ಮಳೆ ನೀರು ಹರಿದು ಹೋಗದೆ ತುಂಬಿಕೊAಡು ಹೊಳೆಯಂತಾಗಿ ವಾಹನ ಸಹಿತ ಪಾದಚಾರಿಗಳ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮೇಲಿನ ಸೋಂಕಾಲು-ಪ್ರತಾಪನಗರದ ಲೋಕೋಪಯೋಗಿ ಇಲಾಖೆ ರಸ್ತೆಯ ಅಲ್ಲಲ್ಲಿ ಚರಂಡಿಯನ್ನು ಶುಚೀಕರಣಗೊಳಿಸದೆ ಮಣ್ಣು, ಕಸಕಡ್ಡಿಗಳು ತುಂಬಿ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿಯುತ್ತಿದೆ. ಇದರಂತೆ ಪ್ರತಾಪನಗರ ರಸ್ತೆಯ ಅಂಬೇಡ್ಕರ್ ಕಲಾ ವೇದಿಕೆ ಸಮೀಪದಲ್ಲಿ ಭಾರೀ ಪ್ರಮಾಣದ ನೀರು ತುಂಬಿ ಹೊಳೆಯಂತಾಗಿ ವಾಹನ ಸಹಿತ ನಡೆದು ಹೋಗಲು ಅಸಾದ್ಯವಾಗಿದ್ದು, ಸ್ಥಳೀಯರು ತೀರಾ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ವಾಹನ ಸಂಚಾರದ ವೇಳೆ ಪಾದಚಾರಿಗಳ ಮೈಮೇಲೆ ಕೆಸರು ನೀರು ಎರಚುತ್ತಿವುದರಿಂದ ಮತ್ತೆ ಬಟ್ಟೆ ಬದಲಾಯಿಸ ಬೇಕಾದ ಪರಿಸ್ಥಿತಿ ಉಂಟಾಗುತ್ತಿರುವುದಾಗಿ ನಾಗರಿಕರು ದೂರಿದ್ದಾರೆ. ಸೂಕ್ತವಾದ ಚರಂಡಿಯನ್ನು ನಿರ್ಮಿಸಲು ಅಥವಾ ಮಳೆ ಗಾಲದ ಮೊದಲು ಚರಂಡಿಯ ಶುಚೀಕರ್ಣಗೊಳಿಸದ ಹಿನ್ನೆಲೆಯಲ್ಲಿ ಮಳೆ ನೀರು ಪೂರ್ತಿ ರಸ್ತೆಯಲ್ಲಿ ಹರಿದು ಹೋಗಲು ಕಾರಣವೆಂದು ಊರವರು ಆರೋಪಿಸಿದ್ದಾರೆ.[


Share with

Leave a Reply

Your email address will not be published. Required fields are marked *