ರಸ್ತೆಯಲ್ಲಿ ಬಾಕಿಯಾದ ಸರಕು ಲಾರಿ  ವಾಹನ ಸಂಚಾರಕ್ಕೆ ಅಡಚಣೆ

Share with


ಉಪ್ಪಳ: ಸರಕು ಸಾಗಾಟದ ಲಾರಿಯೊಂದು ರಸ್ತೆಯಲ್ಲಿ ಕೈಕೊಟ್ಟ ಪರಿಣಾಮ ಉಳಿದ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ. ಕಾಸರಗೋಡು ಭಾಗದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿಯೊಂದು ಶುಕ್ರವಾರ ಮಧ್ಯಾಹ್ನ ಶಿರಿಯ ಸೇತುವೆ ಸಮೀಪದ ನಿರ್ಮಾಣ ಹಂತದ ರಸ್ತೆಯಲ್ಲಿ  ಟಯರ್ ಹೂತು ಹೋಗಿ ಮುಂದ ಸಂಚರಿಸದೆ ಬಾಕಿಯಾಗಿದೆನ್ನಲಾಗಿದೆ.  ಇದರಿಂದ ಇತರ ವಾಹನ ಸಂಚರಿಸಲು ಸ್ಥಳವಕಾಶ ತೀರಾ ಕಡಿಮೆ ಇದ್ದುದರಿಂದ ಇತರ ವಾಹನಗಳು ನಿಧಾನವಾಗಿ ತೆರಳಬೇಕಾಗಿದ್ದು, ಈ ವೇಳೆ ಕಾಸರಗೋಡು- ಮಂಗಳೂರು ಕಡೆಗಳಿಗೆ ತೆರಳುವ ವಾಹನಗಳು ಕಾಯುವ ಅವಸ್ಥೆ ಉಂಟಾಗಿದೆ. ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ಅಲ್ಲಲ್ಲಿ ವಾಹನಗಳ ಸಂಚಾರ ಹಸ್ತವ್ಯಸ್ತ ಉಂಟಾಗುತ್ತಿರುವುದು ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲಿಕುಸಿದೆ. ಸಂಬoಧಪಟ್ಟ ಹೆದ್ದಾರಿ ಇಲಾಖೆ ಅಧಿಕಾರಿಗಳು ರಸ್ತೆಯ ಕಾಮಗಾರಿಯನ್ನು ಪೂರ್ತಿಗೊಳಿಸಲು  ಸಾರ್ವಜನಿಕ ರು ಆಗ್ರಹಿಸಿದೆ.


Share with

Leave a Reply

Your email address will not be published. Required fields are marked *