ಮಂಜೇಶ್ವರ : ಕೇಂದ್ರ ಯೋಜನೆಗಳು ದೇಶದ ಪ್ರತಿ ನಾಗರಿಕರಿಗೆ ಸಿಗುತ್ತಿದೆ. ಆದರೆ ಕೇರಳ ಸರಕಾರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ವಂಚನೆಯಲ್ಲಿ ತೊಡಗಿದೆ. ಬೆಲೆಯೇರಿಕೆ ಎಡ ರಂಗದ ಸಾಧನೆ. ಸದ್ದಿಲದೇ ನೀರಿನ ದರ, ವಿದ್ಯುತ್ ದರ, ಮನೆ ತೆರಿಗೆ, ಭೂಮಿ ತೆರಿಗೆ ಎಲ್ಲಾ ಹೆಚ್ಚಿಸಲಾಗಿದೆ, ಅಲ್ಲಲಿ ಕ್ಯಾಮರಾ ಸ್ಥಾಪಿಸಿ ಅಮಾಯಕ ಡ್ರೈವರ್ ಗಳನ್ನು, ವಾಹನ ಮಾಲಕರನ್ನು ಸರಕಾರ ದೋಚುತ್ತಿದೆ ಎಂದು ರವೀಶ್ ತಂತ್ರಿ ಹೇಳಿದರು.
ಮಂಜೇಶ್ವರ ಕಣ್ವ ತೀರ್ಥ ಕಡಲ ಕಿನಾರೆಯಲ್ಲಿ ನ.11ರಂದು ನಡೆದ ತೀರ ದೇಶಯಾತ್ರೆ ಜಾಥಾ ನಾಯಕರಾಗಿ ಅವರು ಭಾಷಣ ಮಾಡಿದರು. ನ್ಯಾ. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಹರಿಶ್ಚಂದ್ರ ಎಂ, ಅಶ್ವಿನಿ ಪಜ್ವ, ಕೆ.ವಿ ಭಟ್, ಎ.ಕೆ ಕಯ್ಯಾರ್, ಮಣಿಕಂಠ ರೈ, ಲಕ್ಷ್ಮಣ ಬಿ.ಎಂ.ಸುಧಾಮ್ ಗೋಸಾಡ,ರಕ್ಷನ್ ಅಡಕಲಾ, ಭಾಸ್ಕರ ಪೊಯ್ಯೆ, ದೂಮಪ್ಪ ಶೆಟ್ಟಿ, ರಾಜೇಶ್ ಕಣ್ವ ತೀರ್ಥ, ಯಾದವ ಬಡಾಜೆ, ಲೋಕೇಶ್ ನೊಂಡ ನೇತೃತ್ವ ನೀಡಿದರು. ಹಿರಿಯರಾದ ಗೋಪಾಲ ಶೆಟ್ಟಿ ಅರಿಬೈಲ್, ಕೃಷ್ಣ ಶಿವಕೃಪಾ, ವಿನಯ ಭಾಸ್ಕರ್, ಅಶೋಕ್ ಕಣ್ವ ತೀರ್ಥ, ಮನೋಹರ ಕಡಪರ , ರವಿ ತೂಮಿನಾಡ್, ಮಾಧವ ಬಲ್ಯಾಯ ಸುರೇಶ ಮಂಜೇಶ್ವರ, ರವಿ ತುಮಿನಾಡ್ ರಾಜೇಶ್ ಮಜಲು, ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ತುಳಸಿ ಕುಮಾರಿ ವಂದಿಸಿದರು.