
ಪಾಕ್ ಹೇಡಿತನದ ಕೃತ್ಯದ ನಂತರ ಪ್ರಧಾನಿ ಮೋದಿ ಅವರು ಸೇನೆಗಳು & ಭದ್ರತಾ ಪಡೆಗಳಿಗೆ ‘ಅಲ್ಲಿಂದ ಗುಂಡು ಹಾರಿಸಿದರೆ, ಇಲ್ಲಿಂದಲೂ ಶೆಲ್ಗಳನ್ನು ಹಾರಿಸಲಾಗುತ್ತದೆ’ ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಭಾರತಕ್ಕೆ ಯಾರ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಅಮೆರಿಕಕ್ಕೆ ಸಂದೇಶವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಭಾರತ ಇನ್ನು ಮುಂದೆ ಆಕ್ರಮಣಕಾರಿ ನೀತಿಯನ್ನು ಅಳವಡಿಸಿಕೊಳ್ಳುತ್ತದೆ ಎಂದು ಪ್ರಧಾನಿ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.




