ಖಾಸಗಿ ಬಸ್ ಚಾಲಕನಿಗೆ ಹಲ್ಲೆ..; ಆರು ಮಂದಿ ವಿರುದ್ಧ ಕೇಸು ದಾಖಲು

Share with

ಕಾಸರಗೋಡು: ರೈಲ್ವೇ ನಿಲ್ದಾಣ ಸಮೀಪ ಖಾಸಗಿ ಬಸ್‌ ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆಗೈದ ಘಟನೆಗೆ ಸಂಬಂಧಿಸಿ ಆರು ಮಂದಿ ವಿರುದ್ಧ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಚೆರ್ಕಳ ನಿವಾಸಿಯೂ ಶಾನು ಬಸ್‌ನ ಚಾಲಕನಾದ ಮುಹಮ್ಮದ್ ಶಿಹಾಬ್ (26)ರ ಮೇಲೆ ತಂಡ ಹಲ್ಲೆಗೈದಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ರೈಲ್ವೇ ನಿಲ್ದಾಣ ಸಮೀಪಕ್ಕೆ ಬಸ್‌ ತಲುಪಿದಾಗ ಆಟೋ ನಿಲ್ದಾಣದ ಸಮೀಪದಲ್ಲಿದ್ದ ತಂಡವೊಂದು ಬಸ್‌ಗೆ ಹತ್ತಿ ಹಲ್ಲೆಗೈದಿರುವುದಾಗಿ ಶಿಹಾಬ್ ಆರೋಪಿಸಿದ್ದಾರೆ. ಬಸ್ ಸಮಯಕ್ಕೆ ಸಂಬಂಧಿಸಿದ ತರ್ಕ ವಾಗ್ವಾದಕ್ಕೆ ಕಾರಣವಾಗಿದೆಯೆಂದು ಹೇಳಲಾಗುತ್ತಿದೆ. ಚಾಲಕ ಹಾಗೂ ನಿರ್ವಾಹ ಕರನ್ನು ಅಸಭ್ಯವಾಗಿ ನಿಂದಿಸಿದ ತಂಡ ಬಳಿಕ ಹಲ್ಲೆಗೈದಿದೆ. ಮುಖಕ್ಕೆ ಬೆನ್ನಿಗೆ ಹಲ್ಲೆಗೈದು, ಹೊಟ್ಟೆಗೆ ತುಳಿದು ಗಾಯಗೊಳಿಸಿರುವುದಾಗಿ ಶಿಹಾಬ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ಶಿಹಾಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.


Share with

Leave a Reply

Your email address will not be published. Required fields are marked *