ಉಪ್ಪಳ: ಉಪ್ಪಳ ಸಮೀಪದ ಜಯನಗರ ನಿವಾಸಿ ಚಂದ್ರರಾಜ್ ಆಚಾರ್ಯ ಐಲ್ ಇವರ ಪತ್ನಿ ಅಧ್ಯಾಪಿಕೆ ಮಲ್ಲಿಕ [೫೦] ನಿಧನಾರದರು. ಇವರಿಗೆ ನಿನ್ನೆ ಮುಂಜಾನೆ ಮನೆಯಲ್ಲಿ ಹೃದಯಘಾತ ಉಂಟಾಗಿದೆ. ಕೂಡಲೇ ಉಪ್ಪಳದ ಖಾಸಾಗಿ ಆಸ್ಪತ್ರೆಗೆ ತಲುಪಿಸುವ ಮೊದಲೇ ದಾರಿ ಮಧ್ಯೆ ನಿಧನರಾದರು. ಇವರು ಮಂಜೇಶ್ವರ, ನಯಬಜಾರ್, ಬಂಬ್ರಾಣ ಖಾಸಾಗಿ ಶಾಲೆಗಳಲ್ಲಿ ಅಧ್ಯಾಪಿಕೆಯಾಗಿದ್ದರು. ಮೃತರು ಪತಿ, ಮಕ್ಕಳಾದ ಹೃತಿಕರಾಜ್, ಹೃಷಿತರಾಣಿ, ಸಹೋದರರಾದ ವಾಮನ, ಗಣೇಶ, ಶಂಕರ, ಕಿಶೋರ, ಸಹೋದರಿ ತ್ರಿವೇಣಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಸುಬ್ರಾಯ ಆಚಾರ್ಯ, ತಾಯಿ ಗಿರಿಜ ಈ ಹಿಂದೆ ನಿಧನರಾಗಿದ್ದಾರೆ.