
ಉಪ್ಪಳ: ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆಸಲ್ಲಿಸಿ ಇದೀಗ ಲೆಫ್ಟಿನೆಂಟ್ ಕರ್ನಲ್ ಆಗಿ ಬಾಯಾರು ಗ್ರಾಮದ ಬಳ್ಳೂರು ನಿವಾಸಿ ಪವನ್ಕೃಷ್ಣ. ಯಚ್ ಬಡ್ತಿ ಹೊಂದಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದ ಮಥುರಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಕಾರವಾರ, ತೂತುಕುಡಿ, ಮುಂಬೈ, ಗುಜರಾತ್ನ ಫೋರ್ ಬಂದರ್, ಮಂಗಳೂರು ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಡಾ.ನಾರಾಯಣ ಭಟ್-ವೀಣಾ ದಂಪತಿಯ ಪುತ್ರರಾಗಿದ್ದಾರೆ.





