
ಪೂಂಜಾಳಕಟ್ಟೆ: ಪೂಂಜಾಳಕಟ್ಟೆ ವಲಯದ ಬ ಡಗಕಜೆಕಾರ್ ಕಾರ್ಯಕ್ಷೇತ್ರದಲ್ಲಿ ಸೇವಾಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಟೈಲರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟನೆಯನ್ನು ನಡೆಸಲಾಯಿತು ಈ ಕಾರ್ಯಕ್ರಮ ದ ಉದ್ಘಾಟನೆ ಯನ್ನು ಬ್ರಹ್ಮ ಬೈದರ್ಕಳ ಗರಡಿ ಪಂಡವರಕಲ್ಲು, ಸಿ ಎ ಬ್ಯಾಂಕ್ ಕಾರ್ಯದರ್ಶಿ ನಾರಾಯಣ ರವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ದ ಕ ಜಿಲ್ಲಾ ನಿರ್ದೇಶರಾದ ಶ್ರೀ ಮಹಾಬಲ ಕುಲಾಲ್ ಯೋಜನೆಯ ಕಾರ್ಯಕ್ರಮ ಹಾಗೂ ಟೈಲರಿಂಗ್ ತರಬೇತಿ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು ಪಂಚಾಯತ್ ಅಧ್ಯಕ್ಷರು ರಾದ ದೇವದಾಸ್ ಅಬುರ, ಯೋಜನಾಧಿಕಾರಿಗಳಾದ ಮಾಧವ ಗೌಡ, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಚಿದಾನಂದ ರೈ ಕಕ್ಯ ಬ್ಯಾಂಕ್ ನಿರ್ದೇಶಕರು ಹಾಗೂ ಜನಜಾಗೃತಿ ಸದಸ್ಯರಾದ ದಿನೇಶ್ ಜೇಂಖ್ಯಾರ್, ಶುಭಹಾರೈಸಿದರು ಮುವತ್ತು ಜನ ತರಬೇತಿ ದಾರರು ಹಾಗೂ ತರಬೇತಿ ಶಿಕ್ಷಕಿ ಗೀತಾ ಉಪಸ್ಥಿತರಿದ್ದರು ಈ ಮೇಲ್ವಿಚಾರಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ಒಕ್ಕೂಟದ ಅಧ್ಯಕ್ಷರಾದ ಗಿರಿಯಪ್ಪ ಸ್ವಾಗತಿಸಿ ಸೇವಾಪ್ರತಿನಿಧಿ ಕುಸುಮಾ ವಂದಿಸಿದರು





