ಪುತ್ತೂರು : ಇತ್ತಂಡಗಳ ನಡುವೆ ಮಾರಾಮಾರಿ – ಇಬ್ಬರಿಗೆ ಗಾಯ

Share with

ಪುತ್ತೂರು: ಎರಡು ತಂಡಗಳ ನಡುವೆ ಮಾರಾಮಾರಿ ನಡೆದು, ಇಬ್ಬರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿ ಎಂಬಲ್ಲಿ ಮಾ 27 ರಂದು ನಡೆದಿದೆ.

ಈಶ್ವರಮಂಗಲ ಮೂಲದ ದೀಕ್ಷಿತ್ ರೈ ಕುತ್ಯಾಳ ಹಾಗೂ ಸ್ವಸ್ತಿಕ್ ಎಂಬವರಿಗೆ ಗಾಯವಾಗಿದೆ. ಹಣಕಾಸಿನ ವಿಚಾರವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್ ಮಾಡಿದ ವಿಚಾರವಾಗಿ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *