ಪುತ್ತೂರು-ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್

Share with

ಪುತ್ತೂರು: ಶಾಸಕ ಅಶೋಕ್ ರೈ ಅವರ ಕನಸಿನ ಕೂಸು ಪುತ್ತೂರು-ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್ ಸಂಚಾರ ಪ್ರಾರಂಭಗೊಂಡಿದೆ.

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್‌ ಎಲ್ಲೂ ನಿಲುಗಡೆಯಿಲ್ಲದೆ ನೇರವಾಗಿ ಸ್ಟೇಟ್‌ ಬ್ಯಾಂಕ್‌ ಬಸ್‌ ನಿಲ್ದಾಣಕ್ಕೆ ತಲುಪಲಿದೆ. ಪ್ರತೀ ಒಂದು ಗಂಟೆಗೊಂದು ಬಸ್‌ ಹೊರಡಲಿದೆ. ಮಹಿಳೆಯರಿಗೆ ಈ ಬಸ್ ನಲ್ಲಿ ಶಕ್ತಿ ಯೋಜನೆಯನುಸಾರ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇಂದು ಬೆಳಿಗ್ಗೆ ನೂತನ ಬಸ್ ವ್ಯವಸ್ಥೆಗೆ ಶಾಸಕರು ಚಾಲನೆ ನೀಡಿದ್ದಾರೆ.

ಸುಮಾರು ಒಂದು ಗಂಟೆ ಅವಧಿಯಲ್ಲಿ ಬಸ್ ಪುತ್ತೂರಿನಿಂದ ಮಂಗಳೂರು ತಲುಪಲಿದೆ. ಸ್ವಂತ ವಾಹನ ಇದ್ದವರೂ ಈ ಬಸ್ಸಲ್ಲಿ ತೆರಳಬಹುದಾಗಿದೆ. ಯಾಕೆಂದರೆ ಅತಿ ವೇಗದಲ್ಲಿ ಈ ಬಸ್ಸು ಸಂಚರಿಸಲಿರುವ ಕಾರಣ ಸ್ವಂತ ವಾಹನದಷ್ಟೇ ಸಮಯದಲ್ಲಿ ಮಂಗಳೂರು ತಲುಪುತ್ತದೆ. ಹೊಸ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಯಾಣಿಸುವ ಮೂಲಕ ಸಹಕಾರ ನೀಡಿ,ಸರಕಾರಿ ವ್ಯವಸ್ಥೆಗೆ ಬೆಂಬಲ ನೀಡಬೇಕು – ಅಶೋಕ್ ರೈ ಶಾಸಕರು ಪುತ್ತೂರು


Share with

Leave a Reply

Your email address will not be published. Required fields are marked *