ಅಕ್ಷರಗಳನ್ನು ಜೋಡಿಸಿ ಡಾ.ವಿರೇಂದ್ರ ಹೆಗಡೆಯವರ ಭಾವಚಿತ್ರ ರಚಿಸಿ ಹಸ್ತಾಂತರ ಮಾಡಿದ ಉಪ್ಪಳದ ರಾಫಿಯ

Share with

ಉಪ್ಪಳ: ವ್ಯಕ್ತಿಗಳ ಹೆಸರು ಹಾಗೂ ಅವರ ಸಾಧನೆಗಳ ಬಗ್ಗೆ ಅಕ್ಷರಗಳನ್ನು ಜೋಡಿಸಿ ನೂರಾರು ಖ್ಯಾತ ವ್ಯಕ್ತಿಗಳ ಭಾವಚಿತ್ರ ರಚಿಸಿ ಪ್ರಶಸ್ತಿಯನ್ನು ಪಡೆದ ಉಪ್ಪಳ ಪತ್ವಾಡಿಯ ನಿವಾಸಿ ರಾಫಿಯಾ ಇರ್ಷಾದ್ ರವರು ಡಾ.ವಿರೇಂದ್ರ ಹೆಗಡೆಯವರ ಭಾವಚಿತ್ರ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಡಾ.ವಿರೇಂದ್ರ ಹೆಗಡೆಯವರ ಭಾವಚಿತ್ರ ರಚಿಸಿ ಹಸ್ತಾಂತರ ಮಾಡಿದ ಉಪ್ಪಳದ ರಾಫಿಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಂಡೆವೂರಿನ ಶ್ರೀಮಹಿಮಾ ಸ್ವಸಹಾಯ ಸಂಘದ ಸದಸ್ಯೆಯಾದ ಜುಬೈದ ರವರ ಪುತ್ರಿ ರಾಫಿಯಾರವರು ಸಂಘದ ಸದಸ್ಯೆಯರ ಜೊತೆ ಇತ್ತೀಚೆಗೆ ಧರ್ಮಸ್ಥಳ ಕ್ಷೇತ್ರ ಸಂದರ್ಶಿಸಿ ಹೆಗ್ಡೆಯವರನ್ನು ಭೇಟಿಯಾಗಿ ರಚಿಸಿದ ಭಾವಚಿತ್ರವನ್ನು ಅವರಿಗೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ ಈ ಪೊಟೋದಲ್ಲಿ ಕಾವಂದರು ತಮ್ಮ ಸಹಿಯನ್ನು ಹಾಕಿ ಅವರಿಗೆ ಹಸ್ತಾಂತರಿಸಿದ್ದು, ತಮ್ಮ ನೆನಪಿಗೋಸ್ಕರ ಇಟ್ಟುಕೊಳ್ಳಿ ಎಂದು ಹೇಳಿದರು.


Share with

Leave a Reply

Your email address will not be published. Required fields are marked *