ಬಂದ್ಯೋಡು: ಹೇರೂರು ತಾಡ ನಿವಾಸಿ ಪ್ರಖ್ಯಾತ ಪಾಕತಜ್ಞರಾದ ಟಿ.ಗೋಪಾಲಕೃಷ್ಣ ಮಯ್ಯ [73] ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ದೇರಳಕಟ್ಟೆ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಹಲವಾರು ದೇವಸ್ಥಾನಗಳ ಬ್ರಹ್ಮಕಲಶ ಸಹಿತ ಇತರ ಕಾರ್ಯಕ್ರಮಗಳಲ್ಲಿ ಸ್ವಾದಿಷ್ಟ ಅಡುಗೆ ತಯಾರಿಸಿ ಪ್ರಖ್ಯಾತಗೊಂಡಿದ್ದರು. ಮೃತರು ಪತ್ನಿ ಶೋಭಾ.ಟಿ ಮಯ್ಯ, ಮಕ್ಕಳಾದ ಶ್ರುತಿ.ಟಿ ಮಯ್ಯ, ಟಿ. ಶ್ರವಣ್ ಕುಮಾರ್ ಮಯ್ಯ, ಸುಮನ.ಟಿ ಮಯ್ಯ, ಸಹನ.ಟಿ ಮಯ್ಯ, ಅಳಿಯ ಸುದೇಶ್ ಮಯ್ಯ, ಸಹೋದರ, ಸಹೋದರಿಯರಾದ ಟಿ.ನಾರಾಯಣ ಮಯ್ಯ, ಕೇಶವ ಮಯ್ಯ, ಕಾಶ್ಯಮ್ಮ, ಪಾರ್ವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.