ಪ್ರಸಿದ್ಧ ಇತಿಹಾಸಕಾರ, ಚಿಂತಕ ಕೆ.ಎನ್. ಪಣಿಕ್ಕರ್ ನಿಧನರಾಗಿದ್ದಾರೆ. ದೇಶದ ಪ್ರಮುಖ ಮಾರ್ಕ್ಸ್ವಾದಿ ಇತಿಹಾಸಕಾರರಾಗಿದ್ದ ಪಣಿಕ್ಕರ್ ಅವರು ಆಧುನಿಕ ಭಾರತೀಯ ಇತಿಹಾಸದ ಬರವಣಿಗೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.

ಕೇರಳದ ಗುರುವಾಯೂರ್ನಲ್ಲಿ 1936’ರ ಏಪ್ರಿಲ್ 26ರಂದು ಜನಿಸಿದ ಇವರು, ವಸಾಹತುಶಾಹಿ ಸಮಾಜ, ಸಾಮಾಜಿಕ ಚಳವಳಿಗಳು, ಸಂಸ್ಕೃತಿ, ಧರ್ಮ & ರಾಜಕೀಯದ ನಡುವಿನ ಸಂಬಂಧಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಇವರ ಅಗಲುವಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.




