ಸಕಲೇಶಪುರದ ಬೆಳಗೋಡು ಹೋಬಳಿಯ ಬಾಗೆ ಗ್ರಾಮದಲ್ಲಿ ಅನುಮಾನಾಸ್ಪದ ಮೃತದೇಹ ಪತ್ತೆಯಾಗಿದೆ.
ಬಾಗೆ ಗ್ರಾಮ ಹಳೇಕೆರೆಗೆ ಹೋಗುವ ದಾರಿಯ ಮಧ್ಯ ಭಾಗದಲ್ಲಿ ಇರುವ ಬಾಗೆ ಲೋಕೇಶ್ ಅವರ ಬೆಟ್ಟದ ತೋಟವೆಂದೆ ಹೆಸರಾಗಿರುವ ಹಾಗೂ ಶ್ರೀನಿವಾಸ್ ಅವರ ತೋಟದ ಮಧ್ಯದ ಹಳ್ಳದ ಬಳಿ ಕೊಳೆತ ಮೃತದೇಹ ಪತ್ತೆಯಾಗಿದೆ.
ಈ ಹಿಂದೆ ಇಬ್ಬರು ಯುವಕ ಯುವತಿಯ ಹೆಣಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಿನ್ನೆ(ನ.2) ಬೆಳಗ್ಗೆ ಸಂತೋಷ್ ಎನ್ನುವವರು ದನವನ್ನು ಕಟ್ಟಿಹಾಕಲು ಹೋದಾಗ ಕೊಳೆತ ಹೆಣವನ್ನು ನಾಯಿಗಳು ಎಳೆದುಕೊಂಡು ಬಂದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ .
ಸ್ವಲ್ಪ ದಿನಗಳ ಹಿಂದೆ ಮೈಲಾರಿ ಎನ್ನುವವರು ತಮ್ಮ ಹೆಂಡತಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಂಟ್ ನ್ನು ದಾಖಲಿಸಿದ್ದರು. ಅವರೇ ಇರಬಹುದೇ ಎಂಬ ಊಹಾ ಪೋಹಗಳು ಕೂಡ ಎದ್ದಿವೆ. ಪೊಲೀಸ್ ತನಿಖೆ ಆಗುವವರೆಗೆ ಕಾದು ನೋಡಬೇಕಿದೆ.
ಫೋರೆನ್ಸಿಕ್ ಲ್ಯಾಬ್ ನವರು ಪರಿಶೀಲಿಸಿದಾಗ ಸ್ಥಳದಲ್ಲಿ ಹೆಂಗಸಿನ ಕೂದಲು, ಕೊಳೆತ ಮುಖದ ಬುರುಡೆ, ಮೂಳೆಗಳು ದೊರೆತಿವೆ. ತನಿಖೆ ಹಾಗೂ ಫೋರೆನ್ಸಿಕ್ ಲ್ಯಾಬ್ ನ ರಿಪೋರ್ಟ್ ಬಳಿಕವಷ್ಟೆ ಮಾಹಿತಿ ತಿಳಿಯಬೇಕಿದೆ.
ಈ ಸಂದರ್ಭದಲ್ಲಿ ಸಕಲೇಶಪುರ ದಂಡಾಧಿಕಾರಿ ಪುರಂದರ್, ತಾಲ್ಲೂಕು ಆಡಳಿತ ವರ್ಗ ಸಿಬ್ಬಂದಿಗಳು, ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್, ಪಿ.ಎಸ್.ಐ ಪ್ರಮೋದ್, ಎ ಎಸ್ ಐ ನಾಗರಾಜ್, ಬೆಳಗೋಡು ವೈದ್ಯರಾದ ಸವಿತಾ, ಕಾನ್ಸ್ಟೇಬಲ್ ಶ್ರೀಕಂಠ, ಅಭಿಯಂತರರಾದ ಅಭಿನಂದನ್, ನ್ಯಾಯವಾದಿ ಕೃಷ್ಣ ಮೂರ್ತಿ, ಹೆನ್ರಿ, ಬಾಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಸದಸ್ಯರು, ಬಾಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಗೋಪಿನಾಥ್, ಮಾಜಿ ಅಧ್ಯಕ್ಷರಾದ ರಾಕೇಶ್, ಗೋಪಿ , ಋತೀಶ್ ತೋಟದ ಮಾಲೀಕ ಶ್ರೀನಿವಾಸ್ ಹಾಗೂ ಲೋಕೇಶ್, ಗ್ರಾಮಸ್ಥರು ಉಪಸ್ಥಿತರಿದ್ದರು.