ಉಪ್ಪಳ: ಉಪ್ಪಳ ಬಳಿಯ ಮುಳಿಂಜಗುತ್ತು ಮನೆತನದ ಯಜಮಾನ ಸಂಜೀವ ಭಂಡಾರಿ [೮೭] ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಇವರು ಮುಳಿಂಜ ಶ್ರೀ ಮಹಾಲಿಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿದ್ದುಕೊಂಡು ಕ್ಷೇತ್ರದ ಅಭಿವೃದಿಗೆ ಕಾರಣಕರ್ತರಾಗಿದ್ದರು. ನಾಟಿ ವೈದ್ಯರು ಆಗಿದ್ದು, ಆರ್.ಎಸ್.ಎಸ್, ಬಿಜೆಪಿಯ ಹಿರಿಯ ಕಾರ್ಯಕರ್ತರೂ ಆಗಿದ್ದರು. ಮೃತರು ಮಕ್ಕಳಾದ ನಾರಾಯಣ ಭಂಡಾರಿ, ಬಾಲಕೃಷ್ಣ ಭಂಡಾರಿ, ನಿತ್ಯಾನಂದ ಭಂಡಾರಿ, ಚಂದ್ರಶೇಖರ ಭಂಡಾರಿ, ರವಿರಾಜ್ ಭಂಡಾರಿ, ಶಿವಪ್ರಸಾದ್ ಭಂಡಾರಿ, ಶಶಿಕಲ, ಸತ್ಯಾವತಿ, ಸೊಸೆಯಂದಿರಾದ ವಿಜಯಲಕ್ಷ್ಮೀ , ಸುನಿತಾ, ಲಕ್ಷ್ಮಿ., ಪ್ರಮೀಳ, ಸ್ವಾತಿ, ಅಂಕಿತ, ಅಳಿಯಂದಿರಾದ ಯತಿರಾಜ್ ರೈ, ರವೀಂದ್ರ ರೈ, ಸಹೋದರರಾದ ಮಾರಪ್ಪ ಭಂಡಾರಿ, ಬಾಲಕೃಷ್ಣ ಭಂಡಾರಿ, ಸುಂದರ ಭಂಡಾರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಮುತ್ತಕ್ಕೆ, ಓರ್ವ ಪುತ್ರ ಜಯರಾಮ ಭಂಡಾರಿ ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಸಂತಾಪ ಸೂಚಿಸಿದೆ.