ಉಪ್ಪಳ: ಬಂದ್ಯೋಡು ಬಳಿಯ ಬೈದಿಲ ಪೊರಿಕ್ಕೋಡು ನಿವಾಸಿ ಬಿಜೆಪಿ ಜನಸಂಘದ ಹಿರಿಯ ನೇತಾರ ಬಿ.ಎಂ ಗುರುವ [83] ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಇವರು ಮುಳ್ಳೇರಿಯ ಜಿ.ಎಚ್.ಎಸ್ ಶಾಲೆಯಲ್ಲಿ ಎಟೆಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದಾರೆ. ಮೃತರು ಮಕ್ಕಳಾದ ಬಿ.ಎಂ ಶ್ರೀಧರ, ಪಾರ್ವತಿ, ಸೊಸೆ ದೇವಕಿ, ಅಳಿಯ ಕೊರಗಪ್ಪ, ಸಹೋದರ ರಾಘವ, ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ತುಕ್ರು ಈ ಹಿಂದೆ ನಿಧನಹೊಂದಿದ್ದಾರೆ. ಮೃತರ ಮನೆಗೆ ಬಿಜೆಪಿ ಹಾಗೂ ಸಂಘ ಪರಿವಾರದ ನೇತಾರರು, ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.