ಪೆರ್ವೋಡಿಯಲ್ಲಿ ರಸ್ತೆ ಕುಸಿದು ಬಿದ್ದು ಏಳು ತಿಂಗಳು ಕಳೆದರೂ ದುರಸ್ಥಿಗೆ ಕ್ರಮಯಿಲ್ಲ: ವಾಹನ ಸಂಚಾರ ಭೀತಿಯಲ್ಲಿ ಅಧಿಕಾರಿಗಳಿಂದ ಅಪಘಾತ ವಲಯ ನಾಮಫಲಕ ಸ್ಥಾಪನೆ

Share with

ಪೈವಳಿಕೆ: ಲೊಕೋಪಯೋಗಿ ಇಲಾಖೆಯ ಮುಳಿಗದ್ದೆ-ಬಳ್ಳೂರು ರಸ್ತೆಯ ಪೆರ್ವೋಡಿಯಲ್ಲಿ ರಸ್ತೆ ಕುಸಿದು ಬಿದ್ದು ಏಳು ತಿಂಗಳು ಕಳೆದರೂ ದುರಸ್ಥಿಗೆ ಕ್ರಮಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

ವಾಹನ ಸಂಚಾರ ಭೀತಿಯಲ್ಲಿ ಅಧಿಕಾರಿಗಳಿಂದ ಅಪಘಾತ ವಲಯ ನಾಮಫಲಕ ಸ್ಥಾಪನೆ

ಕಳೆದ ವರ್ಷ ಜುಲೈ ತಿಂಗಳಲ್ಲಿ ಮಳೆಗಾಲದ ವೇಳೆ ರಸ್ತೆ ದಿಡೀರನೆ ಕುಸಿದು ಬಿದ್ದಿದ್ದು, ರಸ್ತೆ ಬಳಿಯಲ್ಲೇ ಖಾಸಾಗಿ ವ್ಯಕ್ತಿಯ ತೋಟದ ಕೆರೆ ಇರುವುದರಿಂದ ವಾಹನ ಸಂಚಾರಕ್ಕೆ ಭೀತಿ ಸೃಷ್ಟಿಯಾಗಿದೆ. ಕುಸಿದು ಬಿದ್ದ ಸ್ಥಳಕ್ಕೆ ಅಧಿಕಾರಿಗಳು ತಲುಪಿ ಮಾಹಿತಿ ಸಂಗ್ರಹಿಸಿದ್ದರು. ಆದರೆ ದುರಸ್ಥಿಗೊಳಿಸದ ಕಾರಣ ಆತಂಕದಲ್ಲೇ ಬಸ್ ಸಹಿತ ವಾಹನಗಳು ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಕುಸಿದು ಬಿದ್ದ ಪೆರ್ವೋಡಿಯಲ್ಲಿ ರಸ್ತೆ

ದುರಸ್ಥಿಗೆ ಪಂಚಾಯತ್ ಸದಸ್ಯೆ ಜಯಲಕ್ಷ್ಮಿ ಭಟ್ ಸಹಿತ ಊರವರು ನಿರಂತರ ಅಧಿಕಾರಿಗಳ ಗಮನ ಸೆಳೆಯುತಲೇ ಬಂದಿದ್ದರು. ಈ ಮಧ್ಯೆ ಕಳೆದ ಹಲವು ದಿನಗಳ ಹಿಂದೆ ಲೊಕೋಪಯೋಗಿ ಇಲಾಖೆ ಉದ್ಯೋಗಸ್ಥರು ತಲುಪಿ ಕುಸಿದ ರಸ್ತೆ ಪರಿಸರದಲ್ಲಿ ಹಗ್ಗವನ್ನು ಕಟ್ಟಿ, ಅಘಾತ ವಲಯ ಎಂದು ಬೋರ್ಡ್ ಹಾಕಿದ್ದಾರೆ.

ಆದರೂ ಅಪಾಯ ತಪ್ಪಿದ್ದಲ್ಲ. ರಸ್ತೆಯನ್ನು ಇನ್ನೂ ದುರಸ್ಥಿಗೊಳಿಸುವ ಕ್ರಮಕ್ಕೆ ಮುಂದಾಗದ್ದು, ಊರವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮುಳಿಗದ್ದೆಯಿಂದ ಬಳ್ಳೂರು ರಸ್ತೆ ಮಧ್ಯೆ ವಿವಿಧ ಕಡೇಗಳಲ್ಲಿ ರಸ್ತೆ ಹದಗೆಟ್ಟಿದೆ ಹಾಗೂ ಮಳೆ ನೀರು ಹರಿಯಲು ವ್ಯವಸ್ಥಿತ ಚರಂಡಿಯಿಲ್ಲದೆ ಶೋಚನೀಯವಸ್ಥೆಗೆ ಕಾರಣವಾಗಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಕ್ರಮಯಿಲ್ಲ. ಕುಸಿದು ಬಿದ್ದ ರಸ್ತೆ ಸಹಿತ ಹದಗೆಟ್ಟ ರಸ್ತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ದುರಸ್ಥಿಗೆ ಕ್ರಮಕೈಗೊಳ್ಳದಿದ್ದಲ್ಲಿ ಊರವರನ್ನು ಒಟ್ಟು ಸೇರಿಸಿ ಪ್ರತಿಭಟನೆಗೆ ಮುಂದಾಗಬೇಕಾದಿತು ಎಂದು ಪಂಚಾಯತ್ ವಾರ್ಡ್ ಸದಸ್ಯೆ ಜಯಲಕ್ಷ್ಮಿ ಭಟ್ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *