
ಸಕಲೇಶಪುರ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುವಾಗ ರಾಷ್ಟ್ರೀಯ ಹೆದ್ದಾರಿ-75 ಬಾಗೆ ಸಮೀಪದ ಅರಸು ನಗರ ಬಳಿ ಕಾರು ಅಪಘಾತ ಆಗಿದೆ.
ಅತಿಯಾದ ಮಳೆಯಿಂದ ವೀಲ್ ಜಾರಿ ಡಿವೈಡರ್ ದಾಟಿ ಕಾರು ಪಲ್ಟಿಯಾಗಿದೆ… 2 ಜನರಿಗೆ ಸೀರಿಯಸ್ ಮತ್ತು 4 ಜನರಿಗೆ ಸಾಮಾನ್ಯ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸಾರ್ವಜನಿಕರಲ್ಲಿ ವಿನಂತಿ
ರಾಷ್ಟ್ರೀಯ ಹೆದ್ದಾರಿ-75 ಕಾಂಕ್ರೀಟ್ ರಸ್ತೆಯಾಗಿದ್ದು ಜಾರುವ ಸಾಧ್ಯತೆ ಇದ್ದು ಮಲೆನಾಡಿನಲ್ಲಿ ಜೋರು ಮಳೆಯಾಗುತ್ತಿದ್ದು ವಾಹನ ಸವಾರರು ತಮ್ಮ ವಾಹನಗಳನ್ನು ಅತಿ ವೇಗವಾಗಿ ಚಾಲನೆ ಮಾಡುತ್ತಿರುವುದರಿಂದ ತಮ್ಮ ಕಂಟ್ರೋಲ್ ಗೆ ಸಿಗುತ್ತಿಲ್ಲ ಹಾಗಾಗಿ ಈ ತರ ಘಟನೆಗಳು ಸಂಭವಿಸುತ್ತಿವೆ ಆದ್ದರಿಂದ ವಾಹನಗಳನ್ನು ಜಾಗರೂಕತೆಯಿಂದ ನಿಧಾನವಾಗಿ ಚಲಾಯಿಸಬೇಕೆoದು ಮನವಿ ಮಾಡಲಾಗಿದೆ.





