ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಬಡ ಮಹಿಳೆಗೆ ಸಹಾಯಧನ ಹಸ್ತಾಂತರ

Share with

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ  ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗದ ವತಿಯಿಂದ ಬಂಟ್ವಾಳ ತಾಲೂಕಿನ ಪೂಂಜಲಕಟ್ಟೆ ಪಿಲಾತ ಬೆಟ್ಟು ಗ್ರಾಮದ ಕೊಳಕೆಬೈಲು ಎಂಬಲ್ಲಿ ತೀರಾ ಬಡತನದಲ್ಲಿ ವಾಸಿಸುತ್ತಿದ್ದ  ವಸಂತಿಯವರ ಮನೆ ಭೇಟಿ ಮಾಡಿ   ಯೋಗಕ್ಷೇಮ ವಿಚಾರಿಸಿ ಆರ್ಥಿಕವಾಗಿ ಧನ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್,  ಶೌರ್ಯ  ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕೀ ರೇಖಾ ಪಿ, ಸದಸ್ಯರುಗಳಾದ ಸಂಪತ್ ಶೆಟ್ಟಿ, ನಾರಾಯಣ ಶೆಟ್ಟಿ,  ಮಹಾಬಲ ರೈ , ನಾರಾಯಣ ಪೂಜಾರಿ  ಜನಾರ್ಧನ , ಅಶೋಕ ಹಾರೊದ್ದು, ಅಶೋಕ ಬೊಲ್ಮಾರು, ಲಕ್ಷ್ಮಣ, ಶಶಿಕಲಾ,ನೈನಾಡು ಒಕ್ಕೂಟದ ಸದಸ್ಯರು  ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *