ಬಂಟ್ವಾಳ ತಾಲೂಕಿನ ನಾವೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪೂಪಾಡಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಆಟದ ಮೈದಾನವು ಕೆಸರುಮಯಗೊಂಡಿದ್ದು. ಶಾಲಾ ಮಕ್ಕಳು ನಡೆದಾಡಲು ತುಂಬಾ ಕಷ್ಟಕರವಾಗುತಿದ್ದು ಇದನ್ನು ಮನಗಂಡ ನಾವೂರು ಶೌರ್ಯ ಘಟಕದವರು ಹಾಗೂ ಶಾಲಾಬಿವೃದ್ದಿ ಸಮಿತಿಯವರು ಸೇರಿ ಸ್ವಚ್ಛತಾ ಕಾರ್ಯವನ್ನು ಚರಂಡಿ ರಿಪೇರಿ ಹಾಗೂ ಅಪಾಯಕಾರಿ ಮರಗಳ ಕೊಂಬೆಗಳನ್ನು ತೆರವು ಗೊಳಿಸಿದರು.
ಶೌರ್ಯ ತಂಡದ 12 ಸದಸ್ಯರು ಮತ್ತು ಶಾಲಾಬಿವೃದ್ದಿ ಅಧ್ಯಕ್ಷರು ಎಲ್ಲಾ ಸದಸ್ಯರು ಭಾಗವಹಿಸಿದರು.