ಉಪ್ಪಳ: ಕಯ್ಯಾರ್ ಕೊಲ್ಲಬಂಜಾರ ಸ್ಮಶಾನಕ್ಕೆ ಶೆಡ್ಡ್ ನಿರ್ಮಾಣ ಕಾಮಗಾರಿ ಆರಂಭ: ಊರವರ ಹಲವು ವರ್ಷದ ಬೇಡಿಕೆಗೆ ಸ್ಪಂದನೆ

Share with

ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್‌ನ 14ನೇ ವಾರ್ಡ್ನ ಕಯ್ಯಾರ್ ಬಳಿಯ ಕೊಲ್ಲಬಂಜಾರ ಸಾರ್ವಜನಿಕ ಸ್ಮಶಾನಕ್ಕೆ ಶವ ಸುಡಲು ಶೆಡ್ಡ್ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ.

ಕಯ್ಯಾರ್ ಬಳಿಯ ಕೊಲ್ಲಬಂಜಾರ ಸಾರ್ವಜನಿಕ ಸ್ಮಶಾನಕ್ಕೆ ಶವ ಸುಡಲು ಶೆಡ್ಡ್ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ.

ಸ್ಮಶಾನಕ್ಕೆ ಆವರಣಗೋಡೆ ಮಾತ್ರವೆ ಈ ಹಿಂದೆ ನಿರ್ಮಿಸಲಾಗಿದೆ. ಇದರ ಅಭಿವೃದ್ದಿಗಾಗಿ ಊರವರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ವಾರ್ಡ್ ಸದಸ್ಯೆ ರಾಜೀವಿ ಶೆಟ್ಟಿಗಾರ್ ರವರ ಮುತುವರ್ಜಿಯಿಂದ ಪಂಚಾಯತ್‌ನಿಂದ ಲಕ್ಷಾಂತರ ರೂ ವೆಚ್ಚದಿಂದ ಶೆಡ್ಡ್ ನಿರ್ಮಾಣಕ್ಕೆ ಮಂಜೂರುಗೊಂಡು ಇದೀಗ ಅದರ ಕಾಮಗಾರಿ ಆರಂಭಿಸಿದೆ. ಪಿಲ್ಲರ್ ಹಾಕುವ ಕೆಲಸ ನಡೆಯುತ್ತಿದೆ.

ಕುಡಾಲು ಮೇರ್ಕಳ, ಕಯ್ಯಾರ್ ಗ್ರಾಮ ಸಹಿತ ವಿವಿಧ ಪ್ರದೇಶಗಳಿಗೆ ಈ ಸ್ಮಶಾನದ ಪ್ರಯೋಜನೆಯನ್ನು ಪಡೆಯುತ್ತಿದ್ದಾರೆ. ಕಳಪೆ ಕಾಮಗಾರಿ ನಡೆಸದೆ ಶೀಘ್ರವಾಗಿ ಶೆಡ್ಡ್ ನಿರ್ಮಾಣಗೊಳಿಸಬೇಕು, ಇನ್ನೂ ಹೆಚ್ಚಿನ ಅಭಿವೃದ್ದಿಗೆಗೊಳಿಸಲು ಊರವರು ಒತ್ತಾಯಿಸಿದ್ದಾರೆ.

ಅಲ್ಲದೆ ಈ ಸ್ಮಶಾನ ಗುಡ್ಡೆ ಪ್ರದೇಶದಲ್ಲಿದ್ದು ವ್ಯವಸ್ಥಿತ ರಸ್ತೆ ಇಲ್ಲದಿರುವುದರಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದ್ದು, ಕಾಂಕ್ರೀಟ್ ಅಥವಾ ಡಾಮಾರು ಮೂಲಕ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಪಂಚಾಯತ್ ಅಧಿಕೃತರು ಮುತುವರ್ಜಿವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *