ಜೋಡುಕಲ್ಲು: ಕಯ್ಯಾರು ಸೊಂದಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷತೆಯನ್ನು ಡಾ.ಶ್ರೀಧರ ಭಟ್ ಉಪ್ಪಳ ವಹಿಸಿದರು. ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ, ಕೋಶಾಧಿಕಾರಿ ಅಶೋಕ್ ಕುಮಾರ್ ಹೊಳ್ಳ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಶಾಂತ, ಪುರೋಹಿತ ಯೋಗೀಶ ಕಲ್ಯಾಣತ್ತಾಯ, ವೆಂಕಟರಾಜ ತಂತ್ರಿಗಳು ಪೊಯ್ಯಕಂಡ ಮೊದಲಾದವರು ಉಪಸ್ಥಿತರಿದ್ದರು. ನೂತನ ಸಮಿತಿಯನ್ನು ರಚಿಸಲಾಯಿತು. ಡಾ.ಶ್ರೀಧರ ಭಟ್ ಸ್ವಾಗತಿಸಿ, ವೆಂಕಪ್ಪ ಶೆಟ್ಟಿ ಕಯ್ಯಾರು ದನ್ಯವಾದ ನೀಡಿದರು.