ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ವಿಷು ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದೇವರ ಅವಭೃತ ಸ್ನಾನ ಇಂದು ಸಂಜೆ ನಡೆಯಲಿದೆ. ಬೆಳೀಗ್ಗೆ ಕವಾಟೋದ್ಘಾಟನೆ, ಅಭಿಷೇಕ, ಪೂಜೆ, ಪ್ರಸಾದ, ತುಲಾಭಾರ ಸೇವೆ, ಮಧ್ಯಾಹ್ನ ಹೂವಿನ ಪೂಜೆ ನಡೆಯಿತು. ಸಂಜೆ ೪ರಿಂದ ಆರಾಟೋತ್ಸವ, ರಾಜಾಂಗಣ ಪ್ರಸಾದ, ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರಕ್ಕೆ ಅವಭೃತ ಸ್ನಾನಕ್ಕಾಗಿ ಶ್ರೀ ದೇವರು ತೆರಳುವುದು, ಸಂಜೆ ೫ರಿಂದ ರಾತ್ರಿ ೯ರ ತನಕ ವಿವಿಧ ತಂಡಗಳಿAದ ಭಜನಾ ಕಾರ್ಯಕ್ರಮ, ರಾತ್ರಿ ೧೦ರಿಂದ ದ್ವಜಾವರೋಹಣ, ನವಕ ಕಲಶ, ಸಂಪ್ರೋಕ್ಷಣೆ, ನಾಳೆ ಸಂಜೆ ೫ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.