ಮಂಜೇಶ್ವರ : ಖಾಸಾಗಿ ಶಾಲೆಯ ಮಕ್ಕಳನ್ನು ಸಾಗಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಮಗುಚಿ ಬಿದ್ದು, ಅಧ್ಯಾಪಿಕೆ ಸಹಿತ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ. ಮಂಜೇಶ್ವರ ಪಾವೂರಿನಲ್ಲಿ ಕಾರ್ಯಾಚರಿಸುತ್ತಿರುವ ಆಂಗ್ಲ ಮಾದ್ಯಮ ಶಾಲೆಯ 6ಮಂದಿ ವಿದ್ಯಾರ್ಥಿಗಳು, ಓರ್ವೆ ಅಧ್ಯಾಪಿಕೆ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಇವರನ್ನು ಸ್ಥಳೀಯ ಆಸ್ಪತ್ರೆ ಕೊಡೊಯ್ಯಲಾಗಿದೆ. ಶನಿವಾರ ಸಂಜೆ ಶಾಲೆಯಿಂದ ಮನೆಗೆ ಮಕ್ಕಳನ್ನು ಸಾಗಿಸುತ್ತಿದ್ದ ವಾಹನ ಆರ್ವಾರ್-ಅಂಬುತ್ತಡಿ ರಸ್ತೆಯ ಸೇತುವೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಾಹನ ತೋಡಿಗೆ ಮಗುಚಿ ಬಿದ್ದಿದ್ದೆನ್ನಲಾಗಿದೆ.