ಕುಂಬಳೆ : ಸ್ತ್ರೀ ಸಮೂಹಕ್ಕೆ ಬೆಂಬಲ ವಾಗಿ ನಿಂತಿರುವ ಮೋದಿ ಮತ್ತೆ ಪ್ರಧಾನಿ ಆಗಬೇಕಾದದ್ದು ಈ ದೇಶದ ಅವಶ್ಯಕ, ಮಹಿಳಾ ಮೀಸಲಾತಿ ಈ ದೇಶದ ಸಮಗ್ರ ಅಭಿವೃದ್ಧಿಗೆ ಪ್ರೇರಣೆ ಆಗಲಿದೆ ಎಂದು ಸುಳ್ಯ ಶಾಸಕಿ ಕುಮಾರಿ ಭಗೀರಥಿ ಮುರುಳ್ಯ ಹೇಳಿದರು.
ಕುಂಬಳೆ ಬ್ಯಾಂಕ್ ಹಾಲ್ ನಲ್ಲಿ ಜರಗಿದ ಮಂಜೇಶ್ವರ ವಿ. ಸಾ ಕ್ಷೇತ್ರ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಫಲನುಭವಿಗಳು ಮತ ನೀಡಿದರೆ ಬಿಜೆಪಿ 400ಸಿಟ್ ಗೆಲ್ಲಲಿದೆ ಎಂದು ಅವರು ಹೇಳಿದರು.
ಶ್ರೀ ರವಿಶತಂತ್ರಿ ಕುಂಟರು ಕೇಂದ್ರ ಯೋಜನೆಗಳ ವಿವರಣೆ ನೀಡಿದರು. ಪ್ರೇಮಲತಾ ಎಸ್ ಅಧ್ಯಕ್ಷತೆ ವಹಿಸಿದ್ದರು. ನ್ಯಾ ಬಾಲಕೃಷ್ಣ ಶೆಟ್ಟಿ, ಸುಧಾಮ ಗೊಸಡ, ಗೋಪಾಲ್ ಶೆಟ್ಟಿ ಅರಿಬೈಲ್, ಆದರ್ಶ ಬಿ ಎಂ, ಪುಷ್ಪ ಗೋಪಾಲನ್,ಸುನಿಲ್ ಅನಂತ ಪುರ, ವೇದಿಕೆಯಲಿ ಉಪಸ್ಥಿತರಿದ್ದರು.
ಆಶಾ ಸ್ವಾಗತಿಸಿ, ಮಮತಾ ಕುಲಾಲ್ ಧನ್ಯವಾದ ನೀಡಿದರು. ಮುರಳೀಧರ ಯಾದವ ಕಾರ್ಯಕ್ರಮ ನಿರ್ವಹಿಸಿದರು.
ಆಶಾಲತಾ ಪೆಲಪಾಡ್ಡಿ, ಮೀರಾ ಟೀಚರ್, ವಸಂತ್ ಮೈಯ್ಯಾ, ತುಳಸಿ ಕುಮಾರಿ,ಯತೀರಾಜ್ ಶೆಟ್ಟಿ, ಶೋಭಾ ಶೆಟ್ಟಿ, ಶಶಿಕಲಾ ಮಾಡ ನೇತೃತ್ವ ನೀಡಿದರು.