ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆಯ ಬಳಿಕ ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಕರ್ನಾಟಕದ ಋತ್ವಿಜರು ಸೇರಿದಂತೆ ದೇಶದ ನಾನಾ ಭಾಗಗಳಿಂದ ಬಂದಿರುವ ವೈದಿಕರ ನೇತೃತ್ವದಲ್ಲಿ ಮಂಡಲ ಪೂಜೆ ನಡೆಸಲಾಗುತ್ತಿದೆ.
ಆ ಪ್ರಯುಕ್ತ ಜ.24ರಂದು ತತ್ವ ಹೋಮ, ರಾಮರತಾರಕ ಮಂತ್ರಯಜ್ಞ , ಕೂಷ್ಮಂಡ ಹೋಮ, ರಾಕ್ಷೋಘ್ನ ಹೋಮ ಗಳು ನಡೆದವು. ರಾಮಾಯಣ ಸಹಿತ ವೇದ ಪಾರಾಯಣಗಳು, ಕಲಶಾರಾಧನೆ, ಕಲಶಾಭಿಷೇಕ ಸಹಿತ ಪ್ರಸನ್ನ ಪೂಜೆ ಇತ್ಯಾದಿಗಳು ಸಂಪನ್ನಗೊಂಡವು. ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದಿನ 47 ದಿನಗಳ ಕಾಲ ಹೇಮಂಡಲ ಪೂಜೆ ಮುಂದುವರೆಯಲಿದೆ.