ಉಡುಪಿ: ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ತತ್ವ ಹೋಮ, ರಾಮರತಾರಕ ಮಂತ್ರ ಯಜ್ಞ ಸಂಪನ್ನ

Share with

ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆಯ ಬಳಿಕ ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಕರ್ನಾಟಕದ ಋತ್ವಿಜರು ಸೇರಿದಂತೆ ದೇಶದ ನಾನಾ ಭಾಗಗಳಿಂದ ಬಂದಿರುವ ವೈದಿಕರ ನೇತೃತ್ವದಲ್ಲಿ ಮಂಡಲ ಪೂಜೆ ನಡೆಸಲಾಗುತ್ತಿದೆ.

ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ತತ್ವ ಹೋಮ
ದೇಶದ ನಾನಾ ಭಾಗಗಳಿಂದ ಬಂದಿರುವ ವೈದಿಕರ ನೇತೃತ್ವದಲ್ಲಿ ಮಂಡಲ ಪೂಜೆ ನಡೆಸಲಾಗುತ್ತಿದೆ.

ಆ ಪ್ರಯುಕ್ತ ಜ.24ರಂದು ತತ್ವ ಹೋಮ‌, ರಾಮ‌ರತಾರಕ ಮಂತ್ರಯಜ್ಞ , ಕೂಷ್ಮಂಡ ಹೋಮ, ರಾಕ್ಷೋಘ್ನ ಹೋಮ ಗಳು ನಡೆದವು. ರಾಮಾಯಣ ಸಹಿತ ವೇದ ಪಾರಾಯಣಗಳು, ಕಲಶಾರಾಧನೆ, ಕಲಶಾಭಿಷೇಕ ಸಹಿತ ಪ್ರಸನ್ನ ಪೂಜೆ ಇತ್ಯಾದಿಗಳು ಸಂಪನ್ನಗೊಂಡವು. ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದಿನ 47 ದಿನಗಳ ಕಾಲ ಹೇಮಂಡಲ ಪೂಜೆ ಮುಂದುವರೆಯಲಿದೆ.


Share with

Leave a Reply

Your email address will not be published. Required fields are marked *