ಮಂಜೇಶ್ವರ; ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಬೈಕಿನ ಮೇಲೆ ಲಾರಿ ಹರಿದು ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ನ.11ರಂದು ನಡೆದಿದೆ.


ಬೈಕ್ ಸವಾರ ಮಂಜೇಶ್ವರ ಬಳಿಯ ಕೊಪ್ಪಳ ನಿವಾಸಿ ಅಬ್ದುಲ್ ಖಾದರ್ (71) ಮೃತಪಟ್ಟಿದ್ದಾರೆ ಶನಿವಾರ ಸಂಜೆ ಬೈಕಿನಲ್ಲಿ ಸಂಚರಿಸುತ್ತಿರುವಾಗ ಮಂಜೇಶ್ವರದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ವೇಳೆ ಆಗಮಿಸಿದ ಲಾರಿ ಬೈಕಿನ ಮೇಲೆ ಸಂಚರಿಸಿದೆ ಇದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ




