ಮಳೆಗೆ ಮರ ಮುರಿದು ಬಿದ್ದಾಗ ಮಣ್ಣು ಕುಸಿದು ಜೋಗಿ ಕುಟುಂಬದ ಎರಡು ಮನೆ ಅಪಾಯದಂಚಿನಲ್ಲಿ

Share with

ಉಪ್ಪಳ: ಗಾಳಿ, ಮಳೆಗೆ ಬೃಹತ್ ಮರ ಕುಸಿದು ಬಿದ್ದಾಗ ಜೊತೆಯಲ್ಲಿ ಎತ್ತರ ಪ್ರದೇಶದ ಮಣ್ಣು ಕುಸಿದು ಪರಿಸರದ ಎರಡು ಮನೆಗಳು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಹಂತದಲ್ಲಿದ್ದು, ಕುಟುಂಬ ಆತಂಕಗೊoಡಿದ್ದಾರೆ. ಪೈವಳಿಕೆ ಪಂಚಾಯತ್‌ನ  ಕಯ್ಯಾರ್ ವಿಲೇಜ್ ವ್ಯಾಪ್ತಿಯ ಜೋಡುಕಲ್ಲು ಶಿಶುಮಂದಿರ ಸಮೀಪದ ರಸ್ತೆಕ್ಕಿಂತ ಎತ್ತರವಾಗಿರುವ ಪ್ರದೇಶದಲ್ಲಿ  ಗುಡಿಸಲು ನಿರ್ಮಿಸಿ ವಾಸವಾಗಿರುವ  ಕೂಲಿ ಕಾರ್ಮಿಕ ಶಿವಪ್ರಸಾದ್ ಜೋಗಿ ಹಾಗೂ ಮೀನಾಕ್ಷಿ ಜೋಗಿ ಎಂಬವರ ಮನೆ ಅಪಾಯದಂಚಿನಲ್ಲಿದೆ. ಭಾನುವಾರ ಸಂಜೆ ಭಾರೀ ಮಳೆ, ಗಾಳಿಗೆ ರಸ್ತೆ ಬದಿಯಲ್ಲಿರುವ ಬೃಹತ್ ಮರ ಬುಡ ಸಮೇತ ಕುಸಿದಿದೆ. ಇದರಿಂದ ಮಣ್ಣು ಕುಸಿದು ಕುಟುಂಬದ ಮನೆ ಹತ್ತಿರ ತಲುಪಿದ್ದು, ಯಾವುದೇ ಕ್ಷಣದಲ್ಲಿ ಮುರಿದು ಬೀಳಲಿದೆ.  ಇದರಿಂದ ಕುಟುಂಬ ಆತಂಕಗೊoಡಿದ್ದಾರೆ.  ಸ್ಥಳಕ್ಕೆ ವಾರ್ಡ್ ಸದಸ್ಯ, ವಿಲೇಜ್ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಟುಂಬ ಸ್ವಂತ ಭೂಮಿಗಾಗಿ ವಿಲೇಜ್ ಆಫೀಸ್‌ಗೆ ಈ ಹಿಂದೆ ಅರ್ಜಿಸಲ್ಲಿಸಿದ್ದಾರೆ.


Share with

Leave a Reply

Your email address will not be published. Required fields are marked *