ಮಂಜೇಶ್ವರ: ಸರಕು ಸಾಗಾಟದ ಎರಡು ಲಾರಿಗಳು ಮುಖಾ ಮುಖಾ ಡಿಕ್ಕಿ; ನಾಲ್ವರಿಗೆ ಗಾಯ

Share with

ಮಂಜೇಶ್ವರ: ಸರಕು ಸಾಗಾಟದ ಎರಡು ಲಾರಿಗಳು ಪರಸ್ಪರ ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ಹೊಸಂಗಡಿ ಬಳಿಯಲ್ಲಿ ನಡೆದಿದೆ. ಮಂಗಳೂರು ಭಾಗದಿಂದ ಕಾಸರಗೋಡು ಕಡೆಗೆ ಸಂಚರಿಸುತಿದ್ದ ತಮಿಳುನಾಡು ನೋಂದಾವಣೆಯ ಲಾರಿ ಹಾಗೂ ಕಾಸರಗೋಡು ಭಾಗದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕರ್ನಾಟಕ ನೋಂದಾವಣೆಯ ಲಾರಿ ಪೊಸೋಟು ನೂತನ ಸೇತುವೆ ಬಳಿಯ ಹೆದ್ದಾರಿಯಲ್ಲಿ ಮಾ.17ರಂದು ಅಪಘಾತ ಸಂಭವಿಸಿದೆ.

ಸರಕು ಸಾಗಾಟದ ಎರಡು ಲಾರಿಗಳು ಮುಖಾ ಮುಖಾ ಡಿಕ್ಕಿ

ಅಪಘಾತದ ಬಗ್ಗೆ ಮಾಹಿತಿ ತಿಳಿದು ಸ್ಥಳೀಯರು, ಮಂಜೇಶ್ವರ ಪೋಲೀಸರು ಹಾಗೂ ಉಪ್ಪಳ ಅಗ್ನಿಶಾಮಕ ದಳ ಅಧಿಕಾರಿ ಗೋಪಾಲಕೃಷ್ಣನ್ ನೇತೄತ್ವದಲ್ಲಿ ಘಟನೆ ಸ್ಥಳಕ್ಕೆ ತಲುಪಿ ನುಜ್ಜು ನುಜ್ಜಾದ ಎರಡು ಲಾರಿಗಳಲ್ಲಿ ಸಿಲುಕಿದ ಇಬ್ಬರು ಚಾಲಕರನ್ನು ಹೊರಕ್ಕೆ ತೆಗೆದು ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ತಮಿಳುನಾಡು ಲಾರಿಯ ಚಾಲಕ ಪಾಲಕ್ಕಾಡ್‌ ನಿವಾಸಿ ಎನ್ನಲಾದ ರಘು ಹಾಗೂ ಇನ್ನೊಂದು ಲಾರಿಯ ಚಾಲಕರಿಗೆ ಗಂಭೀರ ಗಾಯಗೊಂಡಿದ್ದಾರೆ. ಇಬ್ಬರು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವುದಾಗಿ ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *