ಮಂಜೇಶ್ವರ: ವಿಧಾನಸಭಾ ಕ್ಷೇತ್ರದ ವಿವಿದೆಡೆ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಮತಯಾಚನೆಗೈದರು. ಹೊಸಂಗಡಿ, ಪೆರ್ಲ, ಸೀತಾಂಗೋಳಿ, ಕುಂಬಳೆ, ಮಜೀರ್ ಪಳ್ಳ, ಮೀಯಪದವು, ಪೈವಳಿಕೆ ನಗರ, ಉಪ್ಪಳಗಳಲ್ಲಿ ರೋಡ್ ಶೋ ಹಾಗೂ ಮತಯಾಚನೆ ನಡೆಯಿತು.
ಮಾಜಿ ಸಚಿವ ಸಿ.ಟಿ.ಅಹ್ಮದಾಲಿ, ಶಾಸಕ ಎಕೆಎಂ ಅಶ್ರಫ್, ಜಿ.ಪಂ.ಸದಸ್ಯೆ ಕಮಲಾಕ್ಷಿ.ಕೆ, ಬ್ಲಾಕ್ ಪಂಚಾಯತು ಅಧ್ಯಕ್ಷೆ ಶಮೀನಾ ಟೀಚರ್, ಪಂ.ಅಧ್ಯಕ್ಷರಾದ ಸೋಮಶೇಖರ ಜೆ.ಎಸ್, ತಾಹಿರಾ, ನೇತಾರರಾದ ಕಲ್ಲಟ್ರ ಮಾಹೀನ್ ಹಾಜೀ, ಅಝೀಝ್ ಮರಿಕ್ಕೆ, ಸುಂದರ ಆರಿಕ್ಕಾಡಿ, ಹರ್ಷಾದ್ ವರ್ಕಾಡಿ, ಮಂಜುನಾಥ ಆಳ್ವಾ, ಲೋಕನಾಥ ಶೆಟ್ಟಿ, ಡಿಎಂಕೆ ಮೊಹಮ್ಮದ್, ಸೈಫುಲ್ಲಾ ತಂಙಳ್, ಜುನೈದ್ ಉರ್ಮಿ, ದಾಮೋದರ ಮಾಸ್ತರ್, ನಾಸರ್ ಮೊಗ್ರಾಲ್, ಬಿ.ಎಂ.ಮುಸ್ತಫಾ, ರವಿ ಪೂಜಾರಿ, ಬಾಬು ಬಂದ್ಯೋಡು, ಶಾನಿದ್ ಕಯ್ಯಾಂಕೂಡೇಲ್, ಬಿಎಸ್ ಗಾಂಭೀರ್, ಮನ್ಸೂರ್ ಬಿಎಂ, ಸುಲೈಮಾನ್ ಊಜಂಪದವು, ಮುಂತಾದವರು, ಉಪಸ್ಥಿತರಿದ್ದರು.