
ಉಡುಪಿ: ಜಿಲ್ಲೆಯ, ಬೈಂದೂರ್ ತಾಲೂಕಿನ ಹಳ್ಳಿಹೊಳೆಯ ದೇವರಬಾಳಿನಲ್ಲಿ ಈ ವಿಶೇಷ ಶಾಸನವು ಕಂಡುಬಂದಿದೆ. ಜಟ್ಟಿಗೇಶ್ವರನೆಂದು ಇಲ್ಲಿನ ರಾಘವೇಂದ್ರ ಚಾತ್ರರ ಕುಟುಂಬ ಈ ಶಾಸನವನ್ನು ಪೂಜಿಸುತ್ತಾ ಬಂದಿದ್ದು, ಸುಮಾರು 20 ವರ್ಷಗಳ ಹಿಂದೆ ಶಾಸಕ್ಕೊಂದು ಗುಡಿಯನ್ನೂ ನಿರ್ಮಾಣ ಮಾಡಿದ್ದಾರೆ.
ಈ ಶಾಸನದ ಮಾಹಿತಿಯನ್ನು ಕಲೆ ಹಾಕಿದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರದೀಪ್ ಯಡಿಯಾಳ ಅವರು ಸ್ಥಳಕ್ಕೆ ತೆರಳಿದ್ದಾರೆ. ಜಟ್ಟಿಗೇಶ್ವರನಾಗಿ ಪೂಜೆ ಮಾಡುವ ಹಿನ್ನಲೆಯಲ್ಲಿ ಫೋಟೋಗಳನ್ನು ತೆಗೆಯಲು ಮಾತ್ರ ಕುಟುಂಬದವರು ಅವಕಾಶ ನೀಡಿದ್ದಾರೆ. ಇದು ಸುಮಾರು ಮೂರು ಕಾಲು ಅಡಿ ಎತ್ತರ ಎರಡು ಕಾಲು ಅಡಿ ಅಗಲ ಇದೆಯೆಂದು ಹಾಗೂ ಇದರ ಮಾಹಿತಿ ಪಡೆಯಬೇಕೆನ್ನುವ ಆಸ್ತೆ ಹೊಂದಿ ಫೋಟೋಗಳನ್ನು ತುಮಕೂರು ವಿ.ವಿ ಸಂಶೋಧನಾರ್ಥಿ ವೈಶಾಲಿ ಜಿ. ಆರ್ ಇವರಿಗೆ ನೀಡಿದ್ದಾರೆ.