ಅನಧಿಕೃತ ಮರಳು ಸಾಗಾಟ: ಎರಡು ಲಾರಿ ವಶಕ್ಕೆ

Share with

ಮಂಜೇಶ್ವರ: ಅನಧಿಕೃತವಾಗಿ ಹೊಳೆಯ ಮರಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಚಾಲಕರನ್ನು ಸೆರೆಹಿಡಿದಿದ್ದಾರೆ. ಸೋಮವಾರ ರಾತ್ರಿ ಮೊರತ್ತಣೆ ಬಸ್ ನಿಲ್ದಾಣ ಬಳಿಯಿಂದ ಎಸ್.ಐ ಪ್ರಶಾಂತ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಹೊಸಂಗಡಿ ಭಾಗಕ್ಕೆ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಚಾಲಕ ವರ್ಕಾಡಿ ತಲೆಕ್ಕಿ ನಿವಾಸಿ ಮೊಹಮ್ಮದ್ ಉಸಾಮ [೨೪] ಎಂಬಾತನನ್ನು ಸೆರೆಹಿಡಿದಿದ್ದಾರೆ.

ಇನ್ನೊಂದು ಲಾರಿಯನ್ನು ರಾತ್ರಿ ಎಸ್.ಐ ನಿಖಿಲ್ ನೇತೃತ್ವದ ಪೋಲೀಸರು ಕಡಂಬಾರ್ ಶಾಲಾ ಬಳಿಯಿಂದ ವಶಪಡಿಸಿಕೊಂಡು ಚಾಲಕ ಕರ್ನಾಟಕದ ಸಾಲೆತ್ತೂರು ನಿವಾಸಿ ಕದರಿ [೪೧]ನನ್ನು ಸೆರೆಹಿಡಿದಿದ್ದಾರೆ.


Share with

Leave a Reply

Your email address will not be published. Required fields are marked *