ಉಪ್ಪಳ: ಕೊಳೆತು ಜೀರ್ಣಾವಸ್ಥೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಮಂಗಲ್ಪಾಡಿ ಸೇವಾಭಾರತಿ ಕಾರ್ಯಕರ್ತರು ಮಂಜೇಶ್ವರ ಪೋಲೀಸರ ಉಪಸ್ಥಿಯಲ್ಲಿ ನ.2ರಂದು ಮಧ್ಯಾಹ್ನ ಐಲ ಶಿವಾಜಿನಗರದ ಹಿಂದೂರುದ್ರ ಭೂಮಿಯಲ್ಲಿ ದಫನ ಮಾಡಲಾಯಿತು.
ಕಳೆದ ತಿಂಗಳ 29ರಂದು ಬೆಳಿಗ್ಗೆ ಮಂಜೇಶ್ವರ ಕಣ್ವತೀರ್ಥ ಹೊಳೆಯ ಬದಿಯಲ್ಲಿರುವ ಕಾಡುಪೊದೆಗಳು ತುಂಬಿದ ಹಿತ್ತಿಲಿನಲ್ಲಿ ಜೀರ್ಣಾವಸ್ಥೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಂಜೇಶ್ವರ ಪೋಲೀಸ್ ಅಧಿಕಾರಿಗಳು ತೆರಳಿ ಪಂಚೆನಮೆ ನಡೆಸಿದ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದೆ. ವಾರೀಸುದಾರರು ಇಲ್ಲದಿರುವುದರಿಂದ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ದಫನ ಮಾಡಲಾಗಿದೆ.