ಉಪ್ಪಳ: ಕಾಸರಗೋಡು ಜಿಲ್ಲೆ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ಮಂತ್ರಾಲಯ ಇದರ ಸಂಚಾಲಕಿ ಹಾಗೂ ಭಜನಾ ಕೀರ್ತನ ಗುರುಗಳಾದ ಕುಂಬಳೆ ಕೃಷ್ಣನಗರದ ಪ್ರೆಮಲತ ಗೋಕುಲ್ದಾಸ್ ಇವರ ನೇತೃತ್ವದಲ್ಲಿ ನಡೆಯುತ್ತಿರುವ 11ನೇ ವರ್ಷದ ಕನಕ ಜಯಂತಿಯನ್ನು ಅವರ ಶಿಷ್ಯೆಯರಿಂದ ಹೇರೂರು ಬಜೆ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಹರಿನಾಮ ಕೀರ್ತನೆಯೊಂದಿಗೆ ಆಚರಿಸಲಾಯಿತು.
ಕ್ಷೇತ್ರದ ಪ್ರಧಾನ ಅರ್ಚಕ ರಾದ ಹರಿನಾರಾಯಣ ಮಯ್ಯ ಹಾಗೂ ಕನಕದಾಸ ಸೇವಾ ಸಮಿತಿಯ ಅಧ್ಯಕ್ಷೆ ಜಯಂತಿ ಬದಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರೇಮಲತಾ ಗೋಕುಲ್ದಾಸ್ ಕಾರ್ಯಕ್ರಮವನ್ನು ನಿರೂಪಿಸಿ ಕನಕದಾಸರ ಕುರಿತು ಧಾರ್ಮಿಕ ಭಾಷಣವನ್ನು ಮಾಡಿದರು.