ಉಪ್ಪಳ: ಭಾರತೀಯ ಜನತಾ ಪಾರ್ಟಿ ಮಂಗಲ್ಪಾಡಿ ಪಂಚಾಯತ್ ಸಮಿತಿಯ ವತಿಯಿಂದ ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಆಚರಿಸಲಾಯಿತು.
ಈ ಸಭೆಯಲ್ಲಿ ಕುಂಬ್ಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ಕುಂಬ್ಳೆ ಮಂಡಲ ಕರ್ಸಕ ಮೋರ್ಚ ಅಧ್ಯಕ್ಷರಾದ ಭರತ್ ರೈ ಕೊಡಿಬೈಲ್ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷರಾದ ದಿನೇಶ್ ವಿ ಮುಳಿಂಜ, ಉಪಾಧ್ಯಕ್ಷರಾದ ಅನಿಲ್ ಕುಮಾರ್ ಐಲ, ಮಂಗಲ್ಪಾಡಿ ಯುವ ಮೋರ್ಚ ಸಮಿತಿ ಅಧ್ಯಕ್ಷರಾದ ಉಣ್ಣಿ ಪ್ರತಾಪ್ ನಗರ ಮತ್ತು ಪಂಚಾಯತ್ ಕಚೇರಿ ಕಾರ್ಯದರ್ಶಿ ಕುಮಾರಿ ದಿವ್ಯ ಮುಂತಾದವರು ಉಪಸ್ಥಿತರಿದ್ದರು.