ಉಪ್ಪಳ: ಮಂಗಲ್ಪಾಡಿ ತಿಂಬರ ನಿವಾಸಿ ಹಿರಿಯ ಕೃಷಿಕರು ಆಗಿದ್ದ ಐತ್ತಪ್ಪ ಶೆಟ್ಟಿ ತಿಂಬರ [82] ಜ.18ರಂದು ಮುಂಜಾನೆ ಹೃದಯಘಾತದಿಂದ ನಿಧನರಾದರು.


ಮೃತರು ಪತ್ನಿ ಯಶೋದ, ಮಕ್ಕಳಾದ ಶಿವಾನಂದ ಶೆಟ್ಟಿ [ನಾಟಕ ಕಲಾವಿದ], ಹರೀಶ್ ಶೆಟ್ಟಿ, ಜಯಶ್ರೀ, ಗೀತಾಂಜಲಿ, ಅಳಿಯಂದಿರಾದ ರಮೇಶ ಆಳ್ವ, ಪ್ರವೀಣ್ ರೈ, ಸೊಸೆ ಸುಶ್ಮಿತ, ಸಹೋದರ ನಾರಾಯಣ ಶೆಟ್ಟಿ, ಸಹೋದರಿ ಸತ್ಯಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಮನೆ ಪರಿಸರದ ಜ.18ರಂದು ಮಧ್ಯಾಹ್ನ ನಡೆಯಿತು. ಮೃತರ ಮನೆಗೆ ಬಿಜೆಪಿ ನೇತಾರರು, ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.




