ಉಪ್ಪಳ: ಬೇಕೂರು ಬಳಿಯ ಉಬರಳೆ ನಿವಾಸಿ [ದಿ] ನಾರಾಯಣ ರಾವ್ ರವರ ಪುತ್ರ ಬಿಜೆಪಿ ಸಕ್ರೀಯ ಕಾರ್ಯಕರ್ತ ಅಶೋಕ್.ಯು ರಾವ್ [51] ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಕಡಂಬಾರು ಮರದ ಮಿಲ್ಲಿನಲ್ಲಿ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ಆಶಾ, ಮಕ್ಕಳಾದ ಅನನ್ಯ, ಅಪೇಕ್ಷ, ಸಹೋದರರಾದ ರಘುರಾಮ, ದಿವಾಕರ, ರಮೇಶ, ಶ್ರೀನಿವಾಸ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಯಿ ಯಶೋದ ಹಿಂದೆ ನಿಧನರಾಗಿದ್ದಾರೆ. ಮನೆಗೆ ವಿವಿಧ ರಾಜಕೀಯ ನೇತಾರರು, ಹಿತೈಷಿಗಳು ಸಹಿತ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಸಿದ್ದಾರೆ