ಉಪ್ಪಳ: ಬಂದ್ಯೋಡಿನಲ್ಲಿ ಬಿಜೆಯಿಂದ ಜನಪಂಚಾಯಾತ್ ಸಾರ್ವಜನಿಕ ಸಭೆ

Share with

ಉಪ್ಪಳ: ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಜರುಗಿದ ಜನಪಂಚಾಯಾತ್, ಸಾರ್ವಜನಿಕ ಸಭೆ ಬಂದ್ಯೋಡುವಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಅಡ್ವ ಪ್ರಕಾಶ್ ಬಾಬು ಉದ್ಘಾಟಿಸಿ, ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳನ್ನು ವಿವರಿಸಿ, ಕೇರಳ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು.

ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಜರುಗಿದ ಜನಪಂಚಾಯಾತ್, ಸಾರ್ವಜನಿಕ ಸಭೆ.

ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಕೊಳಾರು ಸತೀಶ್ಚಂದ್ರ ಭಂಡಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರಮಯ್ಯ ಜಿಲ್ಲಾ ಸಮಿತಿ ಸದಸ್ಯರಾದ ಬಾಬು ಕೆ, ಜಯಂತಿ ಶೆಟ್ಟಿ, ಮುರಳೀಧರ ಯಾದವ, ಉಪಸ್ಥಿತರಿದ್ದರು. ಬಿಜೆಪಿ ಅಧ್ಯಕ್ಷರಾದ ರಾಮಚಂದ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಬಂದ್ಯೋಡು ಸ್ವಾಗತಿಸಿದರು. ದಿನೇಶ್ ಮುಳಿಂಜ ವಂದಿಸಿದರು. ಸಭೆಯಲ್ಲಿ ನೂರಾರು ಮಂದಿ ಉಪ್ಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *