ಉಪ್ಪಳ: ವಾಣಿಜ್ಯ ಶ್ರಮಿಕ ಸಂಘ[ಬಿಎಂಎಸ್] ಜಿಲ್ಲಾ ಸಮ್ಮೇಳನ

Share with

ಉಪ್ಪಳ: ವಾಣಿಜ್ಯ ಶ್ರಮಿಕ ಸಂಘ [ಬಿಎಂಎಸ್] ಜಿಲ್ಲಾ ಸಮ್ಮೇಳನ ಕಾಸರಗೋಡು ಬ್ಯಾಂಕ್ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷರಾದ ನಿಶಾಂತ್ ನೀರ್ಚಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಾಣಿಜ್ಯ ಶ್ರಮಿಕ ಸಂಘ[ ಬಿಎಂಎಸ್] ಜಿಲ್ಲಾ ಸಮ್ಮೇಳನ

ವಾಣಿಜ್ಯ ಮಜ್ಡೂರ್ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ವೇಣುಗೋಪಾಲ್ ಕಣ್ಣೂರ್ ರವರು ಉದ್ಘಾಟನೆ ಮಾಡಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಸಮಾರೋಪ ಭಾಷಣ ಮಾಡಿದರು. 2023.2024 ರ ವರದಿಯನ್ನು ಕಾರ್ಯದರ್ಶಿ ದಿನೇಶ್ ಬಂಬ್ರಾಣ ಮಂಡಿಸಿದರು.

ಕೋಶಾಧಿಕಾರಿ ಸಚಿನ್ ಜೆ.ಪಿ ನಗರ ಲೆಕ್ಕಪತ್ರವನ್ನು ಮಂಡಿಸಿದರು. ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಉಪೇಂದ್ರನ್ ಕೋಟೆಕಣಿ. ಉಪಾಧ್ಯಕ್ಷರುಗಳಾಗಿ ಮಮತ ನಿರ್ಚಾಲ್. ಕೃಷ್ಣ ನಾಯ್ಕ್ ಬಾಯಾರು, ಗೀತಾ ಬದಿಯಡ್ಕ. ಹೇಮಾ ಯುನಿವರ್ಸಿಟಿ ಮಲ್ಲಿಕ ವಿದ್ಯಾನಗರ, ಕಾರ್ಯದರ್ಶಿಯಾಗಿ ಅನಿಲ್ ಬಿ ನಾಯರ್, ಜೊತೆ ಕಾರ್ಯದರ್ಶಿಗಳಾಗಿ ಹಿತೆಶ್ ಕೆ.ವಿ.ಆರ್ ರವಿ ತಟ್ಟೆಮೇಲ್, ಎಂ.ಪಿ ಬಾಲಕೃಷ್ಣನ್, ಶೀಬ ಮಾವುಂಗಾಲ್, ಕೋಶಾಧಿಕಾರಿಯಾಗಿ ನಿಶಾಂತ್ ನೀರ್ಚಾನ್ ಹಾಗೂ 12 ಸಮಿತಿ ಸದಸ್ಯರನ್ನು ನೇಮಿಸಲಾಯಿತು. ದಿನೇಶ್ ಬಂಬ್ರಾಣ ಸ್ವಾಗತ ನೀಡಿ ಅನಿಲ್ ಬಿ.ನಾಯರ್ ಧನ್ಯವಾದ ನೀಡಿದರು.


Share with

Leave a Reply

Your email address will not be published. Required fields are marked *