ಉಪ್ಪಳ ಮಂಜೇಶ್ವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ತಂಡ ದೈಗೋಳಿ ಸಾಯಿನಿಕೇತನ ಸೇವಾಶ್ರಮಕ್ಕೆ ಭೇಟಿ

Share with

ಉಪ್ಪಳ:  ಹಲವಾರು  ವರ್ಷಗಳಿಂದ ವಿವಿಧ ಸೇವಾ ಚಟುವಟುಕೆಗಳಲ್ಲಿ ನಿರತಾರಾಗಿ ಎಲ್ಲರ ಗಮನ ಸೆಳೆದಿರುವ ಉಪ್ಪಳ ಮಂಜೇಶ್ವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ತಂಡ  ದೈಗೋಳಿ ಸಾಯಿನಿಕೇತನ ಸೇವಾಶ್ರಮಕ್ಕೆ  ಭೇಟಿ ನೀಡಿ ಅಲ್ಲಿ ಆಶ್ರಯ ಪಡೆಯುತ್ತಿರುವರ ಬಗ್ಗೆ ಯೋಗ ಕ್ಷೇಮವನ್ನು ವಿಚಾರಿಸಿ ಅವರಿಗೆ ಹಣ್ಣು ಹಂಪಲು ನೀಡಿದರು ಅಲ್ಲದೆ  ಒಂದು ದಿನದ ಅನ್ನದಾನದ ವೆಚ್ಚವನ್ನು ಆಶ್ರಮದ ಸ್ಥಾಪಕರಾದ ಡಾ.ಉದಯಕುಮಾರ್ ನೂಜಿ ರವರಿಗೆ ಹಸ್ತಾಂತರಿಸಿz`ರು. ಈ ವೇಳೆ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಕಮಲಾಕ್ಷ ಪಂಜ, ಕಾರ್ಯದರ್ಶಿ ಚರಣ್ ಬಂದ್ಯೋಡು, ಕೋಶಾಧಿಕಾರಿ ಮಾಧವ.ಕೆ, ಮಾಜಿ ಅಧ್ಯಕ್ಷ  ಲಯನ್ ಲಕ್ಷ÷್ಮಣ್ ಕುಂಬ್ಳೆ ಪಿ.ಎಂ.ಜೆ.ಎಫ್,    ಉಪಾಧ್ಯಾಕ್ಷರುಗಳಾದ ಲಯನ್ ಗಣೇಶ್.ಎಂ, ಲಯನ್ ಅಶೋಕ್ ಎಂ.ಜೆ.ಎಫ್ ಹಾಗೂ ಸದಸ್ಯರಾದ ಲಯನ್ ಪ್ರಸಾದ್.ಕೆ, ಲಯನ್ ಶಾಜಿ.ಎಂ, ಲಯನ್ ಕೃಷ್ಣ.ಎಂ, ಲಯನ್ ಪುರುಶೋತ್ತಮ ಐಲ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *