ವೀರಕಂಭ ಮಾತೃಶ್ರೀ ಗೆಳೆಯರ ಬಳಗದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Share with

ಬಂಟ್ವಾಳ: ವೀರಕಂಭ ಗ್ರಾಮದ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಇದರ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಬಳಗ ಅಧ್ಯಕ್ಷರಾದ ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಟ್ಟಡದಲ್ಲಿ ಜರಗಿತು.

ನೂತನ ಅಧ್ಯಕ್ಷರಾಗಿ ರಮೇಶ್ ಗೌಡ ಮೈರಾ, ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಮೈರಾ, ಸಂಚಾಲಕರಾಗಿ ಸುಧಾಕರ್ ಮೈರಾ, ಗೌರವ ಸಲಹೆಗಾರರಾಗಿ ಚಿನ್ನಾ ಮೈರಾ, ಗೌರವ ಅಧ್ಯಕ್ಷರಾಗಿ ದಿನೇಶ್ ಪೂಜಾರಿ ಸಾಲ್ ಬಿತ್ತಿಲು, ಕಾರ್ಯಾಧ್ಯಕ್ಷರಾಗಿ ಮೋಹನ್ ಗೌಡ ಮೈರಾ, ಉಪಾಧ್ಯಕ್ಷರುಗಳಾಗಿ ವಿಶ್ವನಾಥ್ ಮೈರಾ, ರಮೇಶ್ ಕುಲಾಲ್ ಮೈರಾ, ಜೊತೆ ಕಾರ್ಯದರ್ಶಿಯಾಗಿ ಲೋಕೇಶ್ ಮರಿಯ ಹಿತ್ತಿಲು, ಕೋಶಾಧಿಕಾರಿಯಾಗಿ ಯತೀಶ್ ಮೈರಾ, ಸಂಘಟನಾ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಮೈರಾ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀನಾಥ್ ಮೈರಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಚೇತನ್ ಗೌಡ ಮೈರಾ ಹಾಗೂ ರಂಜಿತ್ ಕುಲಾಲ್ ಬೆತ್ತಸರವ್ ಆಯ್ಕೆಯಾದರು.

ವೀರಕಂಭ ಗ್ರಾಮದ ಮಾತೃಶ್ರೀ ಗೆಳೆಯರ ಬಳಗವು 23 ವರ್ಷವನ್ನು ಪೂರೈಸಿದ್ದು ಮುಂದಿನ 25ನೇ ವರ್ಷಾಚರಣೆಯ ಸಲುವಾಗಿ ಪೂರ್ಣ ತಯಾರಿ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅದರಿಂದ ಎಲ್ಲಾ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕೆಂದು ನೂತನ ಅಧ್ಯಕ್ಷರು ಸದಸ್ಯರಲ್ಲಿ ವಿನಂತಿಸಿದರು.


Share with

Leave a Reply

Your email address will not be published. Required fields are marked *