ರಾಜ್ಯ BJP ಅಧ್ಯಕ್ಷರಾಗಿ BY ವಿಜಯೇಂದ್ರ ಅವರನ್ನು ಮುಂದುವರಿಸಬೇಕೇ? ಬೇಡವೇ? ಎಂಬ ಗೊಂದಲ BJP ಹೈಕಮಾಂಡ್ ಅನ್ನು ಕಾಡುತ್ತಿದೆ. ಯಡಿಯೂರಪ್ಪ ಪ್ರಭಾವಳಿಯಿಂದ ಹೊರಬಂದು ಕಾರ್ಯಕರ್ತರ ನೆಲೆಗಟ್ಟಿನ ಆಧಾರದ ಮೇಲೆ ಪಕ್ಷ ಸಂಘಟಿಸುವುದು ಅಗತ್ಯವಾಗಿದೆ.

ಮುಂದಿನ ರಾಜಕೀಯ ಬೆಳವಣಿಗೆ ಹಿನ್ನೆಲೆ ಇದು ಅನಿವಾರ್ಯವಾಗಿದ್ದು, ಸಿದ್ಧಾಂತದ ಜೊತೆ ರಾಜಿ ಮಾಡಿಕೊಳ್ಳುವುದು ಅಗತ್ಯವಿಲ್ಲ ಎಂದು ಒಂದು ಗುಂಪು ವಾದಿಸುತ್ತಿದೆ. ಇದಕ್ಕೆ ಪ್ರತಿಯಾಗಿ BSY ಪಕ್ಷದ ಆಸ್ತಿ ಎಂದು ಇನ್ನೊಂದು ಬಣ ಪ್ರತಿಪಾದಿಸುತ್ತಿದೆ.




