ವಿಟ್ಲ : ವಿಟ್ಲಕಸಬಾ ಗ್ರಾಮದ ಪೊನ್ನೆತ್ತಡಿ ಶೋಭಿತ್ ಕುಮಾರ್ ಪಿ. ಅವರು ದ್ವಿಚಕ್ರ ವಾಹನ ವಲಾಯಿಸಿಕೊಂಡು, ವಿಟ್ಲ ದಿಂದ ಮಂಗಳಪದವಿನ ಪೊನ್ನೆತ್ತಡಿ ಕಡೆಗೆ ಹೋಗುತ್ತಿದ್ದಾಗ, ವೀರಕಂಭ ಗ್ರಾಮದ ಮಚ್ಚ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಪಿಕ್ ಆಪ್ ವಾಹನವನ್ನು ಅದರ ಚಾಲಕ ಕೆ ವಸಂತ ಅವರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಢಿಕ್ಕಿಯಾಗಿದೆ. ಪರಿಣಾಮ ಶೋಭಿತ್ ಕುಮಾರ್ ಪಿ. ಅವರು ಕೆಳಗೆ ಬಿದ್ದು, ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.