ಉಪ್ಪಳ: ಬೇಕೂರು ಹಿರಣ್ಯಪದವು ಶ್ರೀ ವಿಷ್ಣುಮೂರ್ತಿ ಸೇವಾ ಸಂಘ ಇದರ ಆಶ್ರಯದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಯಾ ಕೆಂಡಸೇವೆ ಎಪ್ರಿಲ್ 6ರಂದು ನಡೆಯಲಿದೆ. ಅಂದು ಬೆಳಿಗ್ಗೆ 6ಕ್ಕೆ ಗಣಹೋಮ, 7ಕ್ಕೆ ಕೊಳ್ಳಿ ಸೇರಿಸುವುದು, ಸಂಜೆ 7ಕ್ಕೆ ಅಗರ್ತಿಮೂಲೆ ತರವಾಡು ಶ್ರೀ ವಿಷ್ಣುಮೂರ್ತಿ ವಯನಾಡು ಕುಲವನ್ ದೈವಸ್ಥಾನದಿಂದ ವಾಧ್ಯ ಘೋಷ ಹಾಗೂ ಕುಣಿತ ಭಜನೆಯೊಂದಿಗೆ ಭಂಡಾರ ಹೊರಡುವುದು, ರಾತ್ರಿ 8ಕ್ಕೆ ಕೈಕೊಟ್ಟು ಕಳಿ, ರಾತ್ರಿ 9ಕ್ಕೆ ಅಗ್ನಿಸ್ಪರ್ಶ, ಅನ್ನಸಂತರ್ಪಣೆ, ರಾತ್ರಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಅಶೋಕ್ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸುವರು.
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಬಾಯಾರು ಧಾರ್ಮಿಕ ಭಾಷಣ ಮಾಡುವರು. ಉತ್ಸವ ಸಮಿತಿ ಅಧ್ಯಕ್ಷ ಕುಂಞರಾಮ ಕಾನ, ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ ಶೆಟ್ಟಿ, ಉಪನ್ಯಾಸಕರಾದ ಧನ್ರಾಜ್.ಎ ಸುಭಾಸ್ನಗರ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸನ್ನಿಧಿ ಶೆಟ್ಟಿ ರವರನ್ನು ಸನ್ಮಾನಿಸಲಾಗುವುದು. ರಾತ್ರಿ 10.30ಕ್ಕೆ ನೃತ್ಯ ಮತ್ತು ನಾಟಕ, 11.30ಕ್ಕೆ ಕುಳಿಚ್ಚೇಟಂ, 12.30ರಿಂದ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ತನಿಯಜ್ಜೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ. 7ರಂದು ಪ್ರಾತಕಾಲ 3.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ, ಬೆಳಿಗ್ಗೆ 5ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.