ಮಂಜೇಶ್ವರ: ವರ್ಕಾಡಿ ಕಾವೀ ಸುಬ್ರಹ್ಮ್ಯಣ್ಯ ದೇವಸ್ಥಾನದ ಸದಸ್ಯರು ಹಾಗೂ ಊರಿನವರು ಜೊತೆಗೂಡಿ ವರ್ಕಾಡಿ ಬೇಕರಿಯಿಂದ ತೌಡುಗೋಳಿ ತನಕ ರಸ್ತೆ ಬದಿಯ ಕಸ ಕಡ್ಡಿಗಳನ್ನು ಹೆಕ್ಕಿ ಶುಚಿತ್ವಗೊಳಿಸಿದ್ದಾರೆ.
![ವರ್ಕಾಡಿ](https://i0.wp.com/veekshakavani.com/wp-content/uploads/2023/07/New-Project-28.jpg?resize=640%2C400&ssl=1)
ಜೊತೆಗೆ ಪರಿಸರ ದಿನದ ಅಂಗವಾಗಿ ವರ್ಷಂಪ್ರತಿಯಂತೆ ಈ ಬಾರಿಯೂ ಮಾರ್ಗದುದ್ದಕ್ಕೂ ಗಿಡಗಳನ್ನು ನೆಟ್ಟಿದ್ದಾರೆ. ಹಲಸಿನ ಹಣ್ಣಿನ ಗಿಡ, ಮಾವಿನ ಹಣ್ಣಿನ ಗಿಡ, ಸೀತಫಲ, ಹೆಬ್ಬಲಸು, ನೇರಳೆ, ಸಾಗುವನಿ, ನೆಲ್ಲಿಕಾಯಿ ಗಿಡಗಳು ಸೇರಿದಂತೆ ಒಟ್ಟು ನೂರು ಗಿಡಗಳನ್ನು ನೆಟ್ಟಿದ್ದಾರೆ.
![ವರ್ಕಾಡಿ](https://i0.wp.com/veekshakavani.com/wp-content/uploads/2023/07/New-Project-2-5.jpg?resize=640%2C400&ssl=1)